ಮಹಾರಾಷ್ಟ್ರ ಮೂಲದ ಅಸಮಕ್ಕುಲಾಲ, ಅಕಿಂತಾ ಮತ್ತು ಧಾವಲ್ ವಿರುದ್ಧ, ಶಂಭುಲಿಂಗೇಶ್ವರ ಟ್ರೇಡರ್ಸ್ ಮಾಲೀಕ ಶಂಭುಲಿಂಗಪ್ಪ ಅಂಗಡಿ ದೂರು ನೀಡಿದ್ದಾರೆ. ಫೆಬ್ರವರಿ 24ರಂದು ₹86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ, ಜೂನ್ 30ರವರೆಗೆ ₹32 ಲಕ್ಷ ಮರಳಿಸಿದ್ದರು. ಬಾಕಿ ಹಣ ಕೇಳಿದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.