ಟ್ರಸ್ಟ್ನ ಹಿರಿಯ ಮುಖಂಡರು ನಾಗಮೂರ್ತಿಸ್ವಾಮಿ ಅವರಿಗೆ ಈಚೆಗೆ ಕರೆ ಮಾಡಿ, ರಾಮ ಮಂದಿರ ನಿರ್ಮಾಣದಲ್ಲಿ ಸಣ್ಣ, ಪುಟ್ಟ ಮೂರ್ತಿ ಕೆತ್ತನೆ, ಸ್ತಂಭ ಹಾಗೂ ಇನ್ನಿತರ ಕಲ್ಲಿನ ಕಟ್ಟಡ ಕಾರ್ಯ ನಿರ್ವಹಿಸಲು ಆಹ್ವಾನಿಸಿದ್ದು, ಶುಕ್ರವಾರ ಮುಂಡರಗಿಯಿಂದ ಅವರು ಅಯೋಧ್ಯೆಗೆ ತೆರಳಿದರು. ಅಲ್ಲಿ ಅವರು 45 ದಿನ ಕೆಲಸ ಮಾಡಲಿದ್ದು ನಂತರ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಕರಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.