ಪಟ್ಟಣದ ಗಣೇಶ ನಗರ, ಶಾಸ್ತ್ರಿ ನಗರ, ಆಶ್ರಯ ಕಾಲೊನಿ, ಊಡಗಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು 40ಕ್ಕೂ ಅಧಿಕ ಒಳಚರಂಡಿಯ ತೆರೆದ ಹೊಂಡಗಳು ತೆರೆದಿರುವುದು ಕಂಡು ಬರುತ್ತಿವೆ. ಇದರಿಂದ ಸಾರ್ವಜನಿಕರು ಆತಂಕದಿಂದ ಸಂಚರಿಸುತ್ತಿದ್ದಾರೆ. ಸಿಸಿ ಮತ್ತು ಡಾಂಬರು ರಸ್ತೆಗಳ ಮಧ್ಯದಲ್ಲಿಯೇ ಒಳಚರಂಡಿಯ ಹೊಂಡ ಇರುವುದರಿಂದ ಬೈಕ್ ಸವಾರರು, ಕಾರು ಚಾಲಕರು, ಮಕ್ಕಳು ಮತ್ತು ಮಹಿಳೆಯರು ಎಚ್ಚರಿಕೆಯಿಂದ ಸಂಚರಿಸುವ ಅನಿವಾರ್ಯತೆ ಇದೆ. ರಾತ್ರಿಯ ವೇಳೆಯಲ್ಲಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದುಂಟು. ಚಿಕ್ಕ ಮಕ್ಕಳು ತೆರಳಿದರಂತೂ ಒಳಚರಂಡಿ ಒಳಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ’ ಎನ್ನುತ್ತಾರೆ ಗಣೇಶ ನಗರ ನಿವಾಸಿ ಬಸವರಾಜ.