ಆದರೆ, ಇನ್ನುಳಿದ 514 ರೈತರು ಯೋಜನೆಯಡಿ ಲಾಭ ಪಡೆಯಲು ಸಾಧ್ಯವಾಗಿರಲಿಲ್ಲ. ‘ಬಡ್ಡಿ ಮನ್ನಾ ಯೋಜನೆಯಡಿ ಅಸಲು ಪಾವತಿಗೆ ರೈತರಿಗೆ ಬಹಳ ಕಡಿಮೆ ಅವಕಾಶ ನೀಡಲಾಗಿದ್ದು, ಈ ಇಷ್ಟು ಕಡಿಮೆ ಅವಧಿಯಲ್ಲಿ ರೈತರು ಸಾಲ ಪಾವತಿಸಲು ಸಾಧ್ಯವಿಲ್ಲ. ಬರಗಾಲ ಇರುವುದರಿಂದ ಅನ್ನದಾತರು ಕಷ್ಟದಲ್ಲಿದ್ದು, ಸಾಲ ಪಾವತಿಗೆ ಹಣ ಹೊಂದಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಕನಿಷ್ಠ ಮೂರು ಅವಧಿ ತಿಂಗಳು ವಿಸ್ತರಿಸಬೇಕು’ ಎಂದು ರೈತರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದರು.