₹ 1 ಕೋಟಿಯ ಯೋಜನೆ:ಒತ್ತುವರಿ ಆಗಿರುವ ಕೆರೆಯ ಜಾಗವನ್ನು ತೆರವು ಮಾಡಿಸಿ, ಕೆರೆಯ ಸುತ್ತ ಬೇಲಿ, ಕುಳಿತುಕೊಳ್ಳಲು ಆಸನಗಳು, ಉದ್ಯಾನ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಐತಿಹಾಸಿಕ ಕೆರೆಯ ಅಭಿವೃದ್ಧಿಯ ಕನಸು ಕಂಡಿದ್ದ ಹಿರಿಯರಾದ ಡಾ.ಚಿತ್ತರಂಜನ್ ಅವರ ಕನಸನ್ನು ನನಸಾಗಿಸಲಾಗುತ್ತದೆ. ಸುಮಾರು ₹ 1ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.