ಶಹಾಪುರ: ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ರೈತ ಮಹೇಶ ಮಲ್ಲಿಕಾರ್ಜುನ (27) ಶುಕ್ರವಾರ ಸಾಲದ ಹೊರೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪುತ್ರ ಇದ್ದಾರೆ.
ಸ್ವಂತ ಒಂದು ಎಕರೆ ಜಮೀನು ಹಾಗೂ ಆರು ಎಕರೆ ಜಮೀನು ಲೀಸ್ ಪಡೆದುಕೊಂಡು ಹತ್ತಿ ಬಿತ್ತನೆ ಮಾಡಿದ್ದರು. ಬೆಳೆ ನಷ್ಟ ಅನುಭವಿಸಿದ್ದರು. ₹ 7 ಲಕ್ಷ ಕೈಸಾಲ ಮಾಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.