ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕಷಾಯವಲ್ಲ, ಆರೋಗ್ಯದ ಪೇಯ

Last Updated 14 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನಿಂಬೆ ಕಷಾಯ

ಬೇಕಾಗುವ ಸಾಮಗ್ರಿಗಳು:

ನಿಂಬೆಹಣ್ಣು –2,

ಜೀರಿಗೆ –3 ಚಮಚ,

ಮೆಣಸಿನಕಾಳು – 1 ರಿಂದ 2,

ತುಳಸಿ ಎಲೆ–3,

ಉಪ್ಪು –ಚಿಟಿಕೆ,

ಕಲ್ಲುಸಕ್ಕರೆ –ಸ್ವಲ್ಪ,

ನೀರು –3 ಲೋಟ

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ನಿಂಬೆಹಣ್ಣು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಕಷಾಯ ಸಿದ್ಧ.

ಪ್ರಯೋಜನ: ಜ್ವರ, ನೆಗಡಿ ಇದ್ದರೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದು ಶೀಘ್ರ ವಾಸಿಯಾಗುವುದು. ಇದನ್ನು ಆರೋಗ್ಯವಂತರೂ ದಿನಕ್ಕೊಂದು ಬಾರಿ ಕುಡಿಯಬಹುದು.

ಹಸಿಶುಂಠಿ ಕಷಾಯ

ಬೇಕಾಗುವ ಸಾಮಗ್ರಿಗಳು:

ದೊಡ್ಡ ಶುಂಠಿ – 1

ಬೆಲ್ಲ –1ಚಮಚ

ಹಾಲು – 1/4 ಕಪ್‌

ನೀರು –2ಕಪ್

ತಯಾರಿಸುವ ವಿಧಾನ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಪುನಃ ಕುದಿಸಿ ಗ್ಯಾಸ್‌ ಆರಿಸಿ. ಇದಕ್ಕೆ ಹಾಲು ಸೇರಿಸಿ. ಬಿಸಿ ಇರುವಾಗಲೇ ಸೇವಿಸಿ

ಪ್ರಯೋಜನ: ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಿನಕ್ಕೆ 2 3 ಬಾರಿ ಸೇವಿಸಿ. ಇದಕ್ಕೆ ಒಂದು ಚಿಕ್ಕ ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಕರಿಮೆಣಸಿನ ಕಷಾಯ

ಬೇಕಾಗುವ ಸಾಮಗ್ರಿಗಳು:

ಕರಿಮೆಣಸು – 2 ಚಮಚ,

ಜೀರಿಗೆ – 2 ಚಮಚ,

ಒಣಶುಂಠಿ – 1/2 ಚಮಚ,

ಕೊತ್ತಂಬರಿ – 1/4 ಚಮಚ,

ಉದ್ದಿನ ಬೇಳೆ – 1/4 ಚಮಚ,

ಏಲಕ್ಕಿ – 1,

ಲವಂಗ – 2,

ಅರಿಸಿನ – 1/4 ಚಮಚ

ತಯಾರಿಸುವ ವಿಧಾನ: ಈ ಮೇಲಿನ ಎಲ್ಲ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳಬಹುದು. ಕಷಾಯ ಮಾಡುವ ವಿಧಾನ: ಎರಡು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಕುದಿಸಿ. ಕುದಿಯುವ ನೀರಿಗೆ ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು, ತುಳಸಿ ಎಲೆ ಹಾಕಿ.

ಪ್ರಯೋಜನ: ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುತ್ತದೆ. ಶೀತದಿಂದ ಬಾಯಿ ರುಚಿಸದಿದ್ದರೆ ಈ ಕಷಾಯ ಕುಡಿದು ನೋಡಿ.

ಕೊತ್ತಂಬರಿ-ಕಷಾಯ

ಬೇಕಾಗುವ ಸಾಮಗ್ರಿಗಳು:

ಜೀರಿಗೆ –1ಚಮಚ

ಧನಿಯಾ –1 ಚಮಚ

ಜ್ಯೇಷ್ಠಮಧು –1

ಮೆಂತ್ಯ –1/4 ಚಮಚ

ಕಾಳುಮೆಣಸು –10

ಓಮದ ಪುಡಿ –1/4 ಚಮಚ

ಅರಿಸಿನ –1ಚಮಚ

ಲವಂಗ –4

ಶುಂಠಿಪುಡಿ –1 ಚಮಚ

ಹಿಪ್ಪಲಿ – 1/4

ಹಾಲು – 1/4 ಕಪ್‌

ಬೆಲ್ಲದ ಪುಡಿ –1 ಚಮಚ

ನೀರು –3 ಕಪ್‌

ತಯಾರಿಸುವ ವಿಧಾನ: ಬೆಲ್ಲವನ್ನು ಬಿಟ್ಟು ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹುರಿದುಕೊಳ್ಳಿ. ಅದು ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಶೋಧಿಸಿ. ಇದಕ್ಕೆ ಹಾಲು ಸೇರಿಸಿ ಕುಡಿಯಿರಿ.

ಪ್ರಯೋಜನ: ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ ಸೇವಿಸಿದರೆ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ, ಶೀತ ವಾಸಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT