<p><strong>ಸಮಾನಾಂತರ ವೇದಿಕೆ (ರಾಯಚೂರು:)</strong> ರಾಜ್ಯದಲ್ಲಿ ಹೊಸದಾಗಿ 900 ಮದ್ಯದ ಅಂಗಡಿಗಳ ಆರಂಭಕ್ಕೆ ಅನುಮತಿ ನೀಡಿರುವುದನ್ನು ಇಲ್ಲಿನ ಸಮಾನಾಂತರ ವೇದಿಕೆಯಲ್ಲಿ ಶುಕ್ರವಾರ ನಡೆದ ಮಹಿಳಾ ಗೋಷ್ಠಿ ಒಕ್ಕೊರಲಿನಿಂದ ಖಂಡಿಸಿತು.</p>.<p>‘ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಈ ಜಿಲ್ಲೆಯ ಮಹಿಳೆಯರು ನಡೆಸಿದ ಬೃಹತ್ ಹೋರಾಟವನ್ನು ಅವಮಾನಿಸುವ ರೀತಿಯಲ್ಲಿ ಸರ್ಕಾರ ಇಂಥ ನಿರ್ಧಾರ ಕೈಗೊಂಡಿದೆ. ಇದು ಆಗದಂತೆ ತಡೆಯಬೇಕು’ ಎಂದು ಆಗ್ರಹಿಸಿದ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಕೂಡ ಉಪಸ್ಥಿತರಿದ್ದರು.</p>.<p><strong>‘ಮಹಿಳೆ: </strong>ಆಧುನಿಕತೆಗೆ ಮುಖಾಮುಖಿ' ಗೋಷ್ಠಿಯ ಆರಂಭದಲ್ಲೇ ಈ ಕುರಿತು ಆಕ್ಷೇಪ ಎತ್ತಿದ ಡಾ. ಎಚ್.ಎಲ್. ಪುಷ್ಪ, ಹಿಂದೊಮ್ಮೆ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುತ್ತಿದ್ದ ಎಂಎಸ್ಐಎಲ್ನಿಂದ ಬದುಕನ್ನು ಅಧೋಗತಿಗೆ ತರುವ ಇಂಥ ಕೆಲಸ ಆಗಬಾರದು’ ಎಂದರು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲ ಉಪನ್ಯಾಸಕರ ಮಾತಿನಲ್ಲೂ ಈ ವಿಷಯ ಪ್ರಸ್ತಾಪವಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ, ‘ಒಂದು ಕೈಯಲ್ಲಿ ಭಾಗ್ಯಗಳನ್ನು ಕೊಟ್ಟ ಸರ್ಕಾರ ಇನ್ನೊಂದು ಕೈಯಲ್ಲಿ ಅವುಗಳನ್ನು ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿದೆ. ಇದು ಸಲ್ಲ. ಎಷ್ಟು ಬೇಕಿದ್ದರೂ ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರ ಮದ್ಯ ಮಾರಾಟದಿಂದ ಮಾತ್ರ ಆದಾಯ ನಿರೀಕ್ಷಿಸುವುದು ತರವಲ್ಲ' ಎಂದರು.</p>.<p>‘ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು' ವಿಷಯವಾಗಿ ಮಾತನಾಡಿದ ಪುಷ್ಪ, ‘ದೇಹ ಮತ್ತು ದೇಹಮೂಲವಾದ ಸವಾಲುಗಳ ಕಾರಣದಿಂದಾಗಿ ಮಹಿಳೆ ಅವಮಾನಕ್ಕೀಡಾಗುತ್ತಿದ್ದಾಳೆ. ದುರ್ಬಲ ಎನಿಸುತ್ತಿದ್ದಾಳೆ. ಇದರ ನಡುವೆಯೇ ಆಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ನಿಟ್ಟಿನ ಪ್ರಯತ್ನವನ್ನೂ ನಡೆಸಿದ್ದಾಳೆ’ ಎಂದರು.</p>.<p>'ಸಾಹಿತ್ಯ: ಲಿಂಗ ರಾಜಕಾರಣ' ವಿಷಯವಾಗಿ ಮಾತನಾಡಿದ ಡಾ.ವಸುಂಧರಾ ಭೂಪತಿ, 'ಲಿಂಗ ರಾಜಕಾರಣ ಛದ್ಮವೇಷದಲ್ಲಿದ್ದು, ಅಮೂರ್ತ ನೆಲೆಗಳಲ್ಲಿ ನಮ್ಮನ್ನು ಬಾಧಿಸುತ್ತಿದೆ. ಪ್ರಶ್ನಿಸಲೂ ಆಗದಂಥ ಸ್ಥಿತಿಗೆ ತಂದೊಡ್ಡಿದೆ' ಎಂದು ವಿಷಾದಿಸಿದರು.</p>.<p>ವಚನಕಾರ್ತಿಯರು. ಸ್ವಮರುಕದ ವ್ಯಕ್ತಿತ್ವದಿಂದ ಹೊರಬಂದು, ಆತ್ಮಘನತೆಯಿಂದ ಮಾತನಾಡಿದ ವ್ಯಕ್ತಿತ್ವಗಳು ಅವು ಎಂದು ಬಣ್ಣಿಸಿದರು.<br /> "ಕೌಟುಂಬಿಕ ವ್ಯವಸ್ಥೆಯೊಳಗ ಮಹಿಳೆ' ವಿಷಯವಾಗಿ ಡಾ. ಕಲಾವತಿ ಬಳ್ಳಾರಿ ಮಾತನಾಡಿದರು.</p>.<p>‘ವ್ಯಾಖ್ಯಾನಕ್ಕೆ ಸಿಗದ ಆಧುನಿಕತೆ ನಿತ್ಯವೂ ತನ್ನ ಸಂರಚನೆಯನ್ನು ಬದಲಿಸಿಕೊಳ್ಳುತ್ತಿರುವ "ಆಧುನಿಕತೆ'ಯನ್ನು ವ್ಯಾಖ್ಯಾನಿಸುವ, ಅದು ತಂದಿತ್ತ ಸಂಕಟಗಳ ಬಗ್ಗೆ ಗೋಷ್ಠಿಯಲ್ಲಿ ಇನ್ನಷ್ಟು ಚರ್ಚೆ ಆಗಬೇಕಿತ್ತು’ ಎಂದು ಡಾ. ಅನಸೂಯಾ ಕಾಂಬಳೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>'ಆಧುನಿಕತೆ ಎಂದರೆ ಹಳೆಯದೆಲ್ಲವನ್ನು ಬಿಟ್ಟುಬಿಡುವುದೇ? ಹೊಸದೆಲ್ಲವೂ ಒಳ್ಳೆಯದೇ?' ಎಂಬುದನ್ನು ವಿಚಾರ ಮಾಡಬೇಕು. ಗಾಬರಿ ಹುಟ್ಟಿಸುವ ರೀತಿಯಲ್ಲಿ ಶೀಘ್ರವಾಗಿ ಬದಲಾವಣೆಗಳಾಗುತ್ತಿದ್ದು, ನಮ್ಮ ಮನೆ, ಮಕ್ಕಳು, ನಮ್ಮೆಲ್ಲರಲ್ಲೂ ಬದಲಾವಣೆ ಕಾಣುತ್ತಿದೆ. ಪ್ರಗತಿಪರರು ಎನ್ನಿಸಿಕೊಂಡವರೇ ಹಳಬರಾಗುತ್ತಿದ್ದಾರೆ. ಈ ಬದಲಾವಣೆ ಪೀಳಿಗೆಯ ನಡುವಿನ ಅಂತರವನ್ನು ಹೆಚ್ಚಿಸಿದೆ' ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ ಆತಂಕ ವ್ಯಕ್ತಪಡಿಸಿದರು. ಬದಲಾವಣೆಯೊಂದು ಮನುಷ್ಯ ಬದುಕಿನ ಘನತೆಯನ್ನು ಎತ್ತಿ ಹಿಡಿದರೆ ಅದನ್ನು ಮುಕ್ತವಾಗಿ ಸ್ವೀಕರಿಸಬೇಕು ಎಂದರು.</p>.<p>ಡಾ. ಗಂಗಾಂಬಿಕಾ ಪಾಟೀಲ ಗೋಷ್ಠಿಗೆ ಪ್ರತಿಕ್ರಿಯಿಸಿದರು. ಡಾ. ಗೀತಾ ವಸಂತ ವಂದಿಸಿದರು.<br /> <br /> * ಕುಟುಂಬ ವ್ಯವಸ್ಥೆಗೆ ಹೊರತಾದ ಲಿವ್ ಇನ್ ರಿಲೇಶನ್ ಹಾಗೂ ತೃತೀಯ ಲಿಂಗಿಗಳ ಸಂಬಂಧದ ನೆಲೆಯಲ್ಲೂ ಚರ್ಚೆ ಆಗಬೇಕು.<br /> <strong>–ಡಾ. ಕಲಾವತಿ ಬಳ್ಳಾರಿ, </strong>ಪ್ರಾಧ್ಯಾಪಕರು</p>.<p>* ಕಾರ್ನಾಡರ 'ಆಡಾಡ್ತ ಆಯುಷ್ಯ' ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ. ಶಶಿಕಲಾ ವೀರಯ್ಯಸ್ವಾಮಿ ಅವರ 'ಇದ್ದೇನಯ್ಯಾ ಇಲ್ಲದಂತೆ'ಗೆ ಹಾಗೂ ಪ್ರತಿಭಾ ನಂದಕುಮಾರ ಅವರ ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ<br /> <strong>–ವಸುಂಧರಾ ಭೂಪತಿ,</strong> ಬರಹಗಾರ್ತಿ</p>.<p>* ಮನುಷ್ಯ ಮನುಷ್ಯನಾಗಿ ಘನತೆಯ ಬದುಕು ಬದುಕಲು ಅವಕಾಶ ಇರುವಂಥ ಬದಲಾವಣೆಯನ್ನು ಆಧುನಿಕತೆ ಎನ್ನಬೇಕು.<br /> –<strong>ಹೇಮಲತಾ ಮಹಿಷಿ, </strong>ವಕೀಲರು, ಬರಹಗಾರರು</p>.<p>* ಆಧುನಿಕತೆ ತಂದ ಬದಲಾವಣೆಯಿಂದ ಮರುಗಟ್ಟಿದ ಹೆಣ್ಣು ಶರೀರಗಳಲ್ಲಿ ಜೀವ ಸಂಚಾರವಾಗಿ ಅವು ತಮ್ಮ ನೋವು ಹೇಳಿಕೊಳ್ಳುತ್ತಿವೆ.<br /> <strong>–ಎಚ್.ಎಲ್. ಪುಷ್ಪ, </strong>ಲೇಖಕರು</p>.<p>* ಮಹಿಳೆಯರು ಇಂತಿಷ್ಟು ಬಂಗಾರ ಇಟ್ಟುಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಹೇಳಿ; ನಿಮ್ಮ ಗುಡಿ ಗುಂಡಾರಗಳಲ್ಲಿ ಇರುವ ಗಂಡು ದೇವರು ಎಷ್ಟು ಬಂಗಾರ ಹೇರಿಕೊಳ್ಳಬೇಕು? ಹೆಣ್ಣು ದೇವರುಗಳು ಎಷ್ಟು ಹೊರಬೇಕು?<br /> <strong>–ಅನಸೂಯಾ ಕಾಂಬಳೆ,</strong> ಬರಹಗಾರ್ತಿ</p>.<p>* ಮಹಿಳೆಯರಷ್ಟೆ ಅಲ್ಲ ಮಹಿಳೆಯರು ರಚಿಸಿದ ಸಾಹಿತ್ಯವೂ ಅವಗಣನೆಗೆ, ಶೋಷಣೆಗೆ ಒಳಗಾಗುತ್ತಿದೆ.<br /> –<strong>ಡಾ. ಗಂಗಾಂಬಿಕಾ ಪಾಟೀಲ, </strong>ಚಿಂತಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಮಾನಾಂತರ ವೇದಿಕೆ (ರಾಯಚೂರು:)</strong> ರಾಜ್ಯದಲ್ಲಿ ಹೊಸದಾಗಿ 900 ಮದ್ಯದ ಅಂಗಡಿಗಳ ಆರಂಭಕ್ಕೆ ಅನುಮತಿ ನೀಡಿರುವುದನ್ನು ಇಲ್ಲಿನ ಸಮಾನಾಂತರ ವೇದಿಕೆಯಲ್ಲಿ ಶುಕ್ರವಾರ ನಡೆದ ಮಹಿಳಾ ಗೋಷ್ಠಿ ಒಕ್ಕೊರಲಿನಿಂದ ಖಂಡಿಸಿತು.</p>.<p>‘ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಈ ಜಿಲ್ಲೆಯ ಮಹಿಳೆಯರು ನಡೆಸಿದ ಬೃಹತ್ ಹೋರಾಟವನ್ನು ಅವಮಾನಿಸುವ ರೀತಿಯಲ್ಲಿ ಸರ್ಕಾರ ಇಂಥ ನಿರ್ಧಾರ ಕೈಗೊಂಡಿದೆ. ಇದು ಆಗದಂತೆ ತಡೆಯಬೇಕು’ ಎಂದು ಆಗ್ರಹಿಸಿದ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಕೂಡ ಉಪಸ್ಥಿತರಿದ್ದರು.</p>.<p><strong>‘ಮಹಿಳೆ: </strong>ಆಧುನಿಕತೆಗೆ ಮುಖಾಮುಖಿ' ಗೋಷ್ಠಿಯ ಆರಂಭದಲ್ಲೇ ಈ ಕುರಿತು ಆಕ್ಷೇಪ ಎತ್ತಿದ ಡಾ. ಎಚ್.ಎಲ್. ಪುಷ್ಪ, ಹಿಂದೊಮ್ಮೆ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುತ್ತಿದ್ದ ಎಂಎಸ್ಐಎಲ್ನಿಂದ ಬದುಕನ್ನು ಅಧೋಗತಿಗೆ ತರುವ ಇಂಥ ಕೆಲಸ ಆಗಬಾರದು’ ಎಂದರು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲ ಉಪನ್ಯಾಸಕರ ಮಾತಿನಲ್ಲೂ ಈ ವಿಷಯ ಪ್ರಸ್ತಾಪವಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ, ‘ಒಂದು ಕೈಯಲ್ಲಿ ಭಾಗ್ಯಗಳನ್ನು ಕೊಟ್ಟ ಸರ್ಕಾರ ಇನ್ನೊಂದು ಕೈಯಲ್ಲಿ ಅವುಗಳನ್ನು ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿದೆ. ಇದು ಸಲ್ಲ. ಎಷ್ಟು ಬೇಕಿದ್ದರೂ ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರ ಮದ್ಯ ಮಾರಾಟದಿಂದ ಮಾತ್ರ ಆದಾಯ ನಿರೀಕ್ಷಿಸುವುದು ತರವಲ್ಲ' ಎಂದರು.</p>.<p>‘ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು' ವಿಷಯವಾಗಿ ಮಾತನಾಡಿದ ಪುಷ್ಪ, ‘ದೇಹ ಮತ್ತು ದೇಹಮೂಲವಾದ ಸವಾಲುಗಳ ಕಾರಣದಿಂದಾಗಿ ಮಹಿಳೆ ಅವಮಾನಕ್ಕೀಡಾಗುತ್ತಿದ್ದಾಳೆ. ದುರ್ಬಲ ಎನಿಸುತ್ತಿದ್ದಾಳೆ. ಇದರ ನಡುವೆಯೇ ಆಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ನಿಟ್ಟಿನ ಪ್ರಯತ್ನವನ್ನೂ ನಡೆಸಿದ್ದಾಳೆ’ ಎಂದರು.</p>.<p>'ಸಾಹಿತ್ಯ: ಲಿಂಗ ರಾಜಕಾರಣ' ವಿಷಯವಾಗಿ ಮಾತನಾಡಿದ ಡಾ.ವಸುಂಧರಾ ಭೂಪತಿ, 'ಲಿಂಗ ರಾಜಕಾರಣ ಛದ್ಮವೇಷದಲ್ಲಿದ್ದು, ಅಮೂರ್ತ ನೆಲೆಗಳಲ್ಲಿ ನಮ್ಮನ್ನು ಬಾಧಿಸುತ್ತಿದೆ. ಪ್ರಶ್ನಿಸಲೂ ಆಗದಂಥ ಸ್ಥಿತಿಗೆ ತಂದೊಡ್ಡಿದೆ' ಎಂದು ವಿಷಾದಿಸಿದರು.</p>.<p>ವಚನಕಾರ್ತಿಯರು. ಸ್ವಮರುಕದ ವ್ಯಕ್ತಿತ್ವದಿಂದ ಹೊರಬಂದು, ಆತ್ಮಘನತೆಯಿಂದ ಮಾತನಾಡಿದ ವ್ಯಕ್ತಿತ್ವಗಳು ಅವು ಎಂದು ಬಣ್ಣಿಸಿದರು.<br /> "ಕೌಟುಂಬಿಕ ವ್ಯವಸ್ಥೆಯೊಳಗ ಮಹಿಳೆ' ವಿಷಯವಾಗಿ ಡಾ. ಕಲಾವತಿ ಬಳ್ಳಾರಿ ಮಾತನಾಡಿದರು.</p>.<p>‘ವ್ಯಾಖ್ಯಾನಕ್ಕೆ ಸಿಗದ ಆಧುನಿಕತೆ ನಿತ್ಯವೂ ತನ್ನ ಸಂರಚನೆಯನ್ನು ಬದಲಿಸಿಕೊಳ್ಳುತ್ತಿರುವ "ಆಧುನಿಕತೆ'ಯನ್ನು ವ್ಯಾಖ್ಯಾನಿಸುವ, ಅದು ತಂದಿತ್ತ ಸಂಕಟಗಳ ಬಗ್ಗೆ ಗೋಷ್ಠಿಯಲ್ಲಿ ಇನ್ನಷ್ಟು ಚರ್ಚೆ ಆಗಬೇಕಿತ್ತು’ ಎಂದು ಡಾ. ಅನಸೂಯಾ ಕಾಂಬಳೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>'ಆಧುನಿಕತೆ ಎಂದರೆ ಹಳೆಯದೆಲ್ಲವನ್ನು ಬಿಟ್ಟುಬಿಡುವುದೇ? ಹೊಸದೆಲ್ಲವೂ ಒಳ್ಳೆಯದೇ?' ಎಂಬುದನ್ನು ವಿಚಾರ ಮಾಡಬೇಕು. ಗಾಬರಿ ಹುಟ್ಟಿಸುವ ರೀತಿಯಲ್ಲಿ ಶೀಘ್ರವಾಗಿ ಬದಲಾವಣೆಗಳಾಗುತ್ತಿದ್ದು, ನಮ್ಮ ಮನೆ, ಮಕ್ಕಳು, ನಮ್ಮೆಲ್ಲರಲ್ಲೂ ಬದಲಾವಣೆ ಕಾಣುತ್ತಿದೆ. ಪ್ರಗತಿಪರರು ಎನ್ನಿಸಿಕೊಂಡವರೇ ಹಳಬರಾಗುತ್ತಿದ್ದಾರೆ. ಈ ಬದಲಾವಣೆ ಪೀಳಿಗೆಯ ನಡುವಿನ ಅಂತರವನ್ನು ಹೆಚ್ಚಿಸಿದೆ' ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ ಆತಂಕ ವ್ಯಕ್ತಪಡಿಸಿದರು. ಬದಲಾವಣೆಯೊಂದು ಮನುಷ್ಯ ಬದುಕಿನ ಘನತೆಯನ್ನು ಎತ್ತಿ ಹಿಡಿದರೆ ಅದನ್ನು ಮುಕ್ತವಾಗಿ ಸ್ವೀಕರಿಸಬೇಕು ಎಂದರು.</p>.<p>ಡಾ. ಗಂಗಾಂಬಿಕಾ ಪಾಟೀಲ ಗೋಷ್ಠಿಗೆ ಪ್ರತಿಕ್ರಿಯಿಸಿದರು. ಡಾ. ಗೀತಾ ವಸಂತ ವಂದಿಸಿದರು.<br /> <br /> * ಕುಟುಂಬ ವ್ಯವಸ್ಥೆಗೆ ಹೊರತಾದ ಲಿವ್ ಇನ್ ರಿಲೇಶನ್ ಹಾಗೂ ತೃತೀಯ ಲಿಂಗಿಗಳ ಸಂಬಂಧದ ನೆಲೆಯಲ್ಲೂ ಚರ್ಚೆ ಆಗಬೇಕು.<br /> <strong>–ಡಾ. ಕಲಾವತಿ ಬಳ್ಳಾರಿ, </strong>ಪ್ರಾಧ್ಯಾಪಕರು</p>.<p>* ಕಾರ್ನಾಡರ 'ಆಡಾಡ್ತ ಆಯುಷ್ಯ' ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ. ಶಶಿಕಲಾ ವೀರಯ್ಯಸ್ವಾಮಿ ಅವರ 'ಇದ್ದೇನಯ್ಯಾ ಇಲ್ಲದಂತೆ'ಗೆ ಹಾಗೂ ಪ್ರತಿಭಾ ನಂದಕುಮಾರ ಅವರ ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ<br /> <strong>–ವಸುಂಧರಾ ಭೂಪತಿ,</strong> ಬರಹಗಾರ್ತಿ</p>.<p>* ಮನುಷ್ಯ ಮನುಷ್ಯನಾಗಿ ಘನತೆಯ ಬದುಕು ಬದುಕಲು ಅವಕಾಶ ಇರುವಂಥ ಬದಲಾವಣೆಯನ್ನು ಆಧುನಿಕತೆ ಎನ್ನಬೇಕು.<br /> –<strong>ಹೇಮಲತಾ ಮಹಿಷಿ, </strong>ವಕೀಲರು, ಬರಹಗಾರರು</p>.<p>* ಆಧುನಿಕತೆ ತಂದ ಬದಲಾವಣೆಯಿಂದ ಮರುಗಟ್ಟಿದ ಹೆಣ್ಣು ಶರೀರಗಳಲ್ಲಿ ಜೀವ ಸಂಚಾರವಾಗಿ ಅವು ತಮ್ಮ ನೋವು ಹೇಳಿಕೊಳ್ಳುತ್ತಿವೆ.<br /> <strong>–ಎಚ್.ಎಲ್. ಪುಷ್ಪ, </strong>ಲೇಖಕರು</p>.<p>* ಮಹಿಳೆಯರು ಇಂತಿಷ್ಟು ಬಂಗಾರ ಇಟ್ಟುಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಹೇಳಿ; ನಿಮ್ಮ ಗುಡಿ ಗುಂಡಾರಗಳಲ್ಲಿ ಇರುವ ಗಂಡು ದೇವರು ಎಷ್ಟು ಬಂಗಾರ ಹೇರಿಕೊಳ್ಳಬೇಕು? ಹೆಣ್ಣು ದೇವರುಗಳು ಎಷ್ಟು ಹೊರಬೇಕು?<br /> <strong>–ಅನಸೂಯಾ ಕಾಂಬಳೆ,</strong> ಬರಹಗಾರ್ತಿ</p>.<p>* ಮಹಿಳೆಯರಷ್ಟೆ ಅಲ್ಲ ಮಹಿಳೆಯರು ರಚಿಸಿದ ಸಾಹಿತ್ಯವೂ ಅವಗಣನೆಗೆ, ಶೋಷಣೆಗೆ ಒಳಗಾಗುತ್ತಿದೆ.<br /> –<strong>ಡಾ. ಗಂಗಾಂಬಿಕಾ ಪಾಟೀಲ, </strong>ಚಿಂತಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>