ಇಬ್ಬರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ಯುವಾಗ ನಿತೀನ್ ತ್ಯಾಗಿ, ಅಮಾನತುಲ್ಲಾ ಖಾನ್ ಮತ್ತು ಜರ್ನೈಲ್ ಸಿಂಗ್ ಸೇರಿದಂತೆ ಕೆಲವು ಆಪ್ ಶಾಸಕರು ಸದನದಿಂದ ಹೊರಗೆ ಬಂದರು. ಕಾಗದ ತೂರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಇಬ್ಬರನ್ನು ಥಳಿಸಿದರು. ಸುಮಾರು ಅರ್ಧ ಗಂಟೆ ಕಾಲ ಗೊಂದಲದ ವಾತಾವರಣವಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಘಟನೆ ಬಳಿಕ ಸದನವನ್ನು ಕೆಲಕಾಲ ಮುಂದೂಡಲಾಯಿತು.