ಬಹಳಷ್ಟು ಸರ್ಕಾರಿ ಶಾಲಾ ಆವರಣಗಳು ಜಲಾವೃತವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡಿದರು. ಮಾನ್ವಿ ತಾಲ್ಲೂಕಿನಲ್ಲಿ 77.9 ಮಿಲಿಮೀಟರ್ ಮಳೆಯಾಗಿದೆ.
ದೇವದುರ್ಗ ತಾಲ್ಲೂಕಿನಲ್ಲಿ 28.1, ಲಿಂಗಸುಗೂರು ತಾಲ್ಲೂಕಿನಲ್ಲಿ 16.1, ರಾಯಚೂರು ತಾಲ್ಲೂಕಿನಲ್ಲಿ 34.8, ಸಿಂಧನೂರು ತಾಲ್ಲೂಕಿನಲ್ಲಿ 43.5 ಮಿಲಿ ಮೀಟರ್ ಮಳೆಯಾಗಿದೆ. ಒಣಗಿದ್ದ ಕೆರೆ, ಹಳ್ಳಕೊಳ್ಳುಗಳು ತುಂಬಿ ಹರಿಯಲಾರಂಭಿಸಿವೆ. ಇದರಿಂದ ಕೆಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.