ಹೊಳಲು: ಹೂವಿನಹಡಗಲಿಗೆ ಇದೇ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಡಲಿರುವ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಭಾನುವಾರ ಸಂಜೆ ಇಲ್ಲಿ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿ, ‘ಹೂವಿನಹಡಗಲಿ ಕ್ಷೇತ್ರದಲ್ಲಿ ಯಾರೂ ಎರಡು ಸಲ ಗೆದ್ದಿರುವ ಉದಾಹರಣೆ ಇಲ್ಲ. ಈ ಬಾರಿ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಇತಿಹಾಸ ನಿರ್ಮಿಸಲಿದೆ’ ಎಂದು ಹೇಳಿದರು.
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ‘ಎಂ.ಪಿ. ಪ್ರಕಾಶ್ ಅವರು ನನ್ನನ್ನು ಗುರುತಿಸಿ ಹಡಗಲಿ ಕ್ಷೇತ್ರಕ್ಕೆ ಕರೆ ತಂದರು. ಅವರ ಆಶಯದಂತೆ ಕೆಲಸ ನಿರ್ವಹಿಸುತ್ತಿದ್ದೇನೆ’ ಎಂದು ತಿಳಿಸಿದರು.
ಎಂ.ಪರಮೇಶ್ವರಪ್ಪ, ಇಐಗೋಳ ಚಿದಾನಂದ, ಆರ್.ಹನುಮಂತಪ್ಪ ಇದ್ದರು.