ಮಲಪ್ರಭಾ ನದಿ ದಡದಲ್ಲಿ ಈಗಿನ ಒಡಕಹೊಳೆಯ ದುರ್ಗಮ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಆ ಯೋಗಿಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದರು. ಎರಡು ತಿಂಗಳ ಕಠಿಣ ತಪಸ್ಸು ಮಾಡಿ ಭಕ್ತರ ಮನದಾಸೆಯಂತೆ ಪಟ್ಟಣಕ್ಕೆ ಬಂದಿದ್ದರು. ಭಕ್ತರಿಗೆ ಅಧ್ಯಾತ್ಮ, ಪ್ರವಚನಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು. ಸಮಾಜಸೇವಾ ಮನೋಭಾವ ಬೆಳೆಸುವ ಮಹತ್ತರ ಕಾರ್ಯ ಮಾಡಿದವರು ಎಂದು ಭಕ್ತರು ನೆನೆಯುತ್ತಾರೆ.