ಸೂತ್ರ ಬಿಡಿಸುವ ಸಲುವಾಗಿ ಚಾವಣಿ ಹತ್ತಿದ್ದ ಆತ, ಮುಂದೆ ಹಾಕಲಾಗಿದ್ದ ತಗಡಿನ ಶೀಟ್ ತುಳಿದಿದ್ದ. ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ ತುಂಡಾಗಿ ಆ ತಗಡಿಗೆ ತಾಗಿಕೊಂಡಿತ್ತು. ಇದರಿಂದಾಗಿ ಮಾದಪ್ಪನಿಗೆ ವಿದ್ಯುತ್ ಪ್ರವಹಿಸಿತು. ಕೂಡಲೇ ಆತನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ 1.50ಕ್ಕೆ ಕೊನೆಯುಸಿರೆಳೆದ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ.