ಆಂಧ್ರ ಪ್ರದೇಶಕ್ಕೆ ವಿಶೇಷ ಹಣಕಾಸು ನೆರವು ನೀಡುವಂತೆ ಕೆಲವು ಸಂಸದರು ಸಂಸತ್ನಲ್ಲಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಕೇವಲ ರಾಜಕೀಯ ಹಿತಾಸಕ್ತಿಗಾಗಿ ಹಿಂದಿನ ಯುಪಿಎ ಸರ್ಕಾರ ದಕ್ಷಿಣ ಭಾರತದ ರಾಜ್ಯವನ್ನು ಒಡೆಯಿತು ಎಂದು ಟೀಕಿಸಿದರು. ಹೊಸ ರಾಜ್ಯಗಳ ರಚನೆ ವಿಚಾರ ಬಂದಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಅವರ ಆಡಳಿತ ಕಾಲದಲ್ಲಿ ಉತ್ತರಾಖಂಡ, ಜಾರ್ಖಂಡ್ ಮತ್ತು ಛತ್ತೀಸ್ಗಢ ಹೊಸದಾಗಿ ರಚನೆಯಾಗಿದ್ದವು. ಅದರ ಹಿಂದಿನ ದೂರದೃಷ್ಟಿಯನ್ನು ಗಮನಿಸಬೇಕು ಎಂದು ಮೋದಿ ಹೇಳಿದರು.