2013 ರಲ್ಲಿ ವೀರಶೈವ– ಲಿಂಗಾಯತರಿಗೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅಂದಿನ ಯುಪಿಎ ಸರ್ಕಾರ ಮನವಿಯನ್ನು ತಿರಸ್ಕರಿಸಿತ್ತು. ಈ ವಿಚಾರದ ಅರಿವು ಇದ್ದೂ ಮುಖ್ಯಮಂತ್ರಿ ಈ ಸಮುದಾಯಕ್ಕೆ ಹುಸಿ ಭರವಸೆಗಳನ್ನು ನೀಡಿ ಅವರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಇಲ್ಲದ ಆಸೆಗಳನ್ನು ಹುಟ್ಟಿಸಿ ಮೋಸ ಮಾಡಿದೆ ಎಂದು ಅವರು ಟೀಕಿಸಿದರು.