ನೆರಳಿನ ವ್ಯವಸ್ಥೆಗೆ ಮನವಿ: ‘ದೇವರ ದರ್ಶನ ಪಡೆಯಲು ಉರಿ ಬಿಸಿಲಿನಲ್ಲೇ ಸರದಿಯಲ್ಲಿ ನಿಲ್ಲಬೇಕಾಗಿದೆ. ಅಲ್ಲದೇ, ನೆಲಕ್ಕೆ ಕಾಂಕ್ರೀಟ್ ಹಾಕಿರುವುದರಿಂದ ಕೆಂಡದ ಮೇಲೆ ನಿಂತಂತೆ ಆಗುತ್ತದೆ. ಆದ್ದರಿಂದ ಸಣ್ಣ ಮಕ್ಕಳನ್ನು ಹೊತ್ತು ನಿಲ್ಲಬೇಕಾದ ಪರಿಸ್ಥಿತಿ ಇದ್ದು, ಶಾಶ್ವತ ನೆರಳಿನ ಸೌಲಭ್ಯ ಕಲ್ಪಿಸಬೇಕು’ ಎಂದು ತಮಿಳುನಾಡಿನ ಮಾರಿಯಪ್ಪನ್ ಮನವಿ ಮಾಡಿದರು.