ಬೆಳಗಾವಿ: ಇಲ್ಲಿನ ಗಾಂಧಿನಗರ ಹಣ್ಣಿನ ಮಾರುಕಟ್ಟೆ ಎದುರಿನಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಯುವತಿಯರಿಗೆ ಸೋಮವಾರ ಸಂಜೆ ಡಿಕ್ಕಿಯಾದ ಬಿಎಂಡಬ್ಲ್ಯು ಕಾರನ್ನು ರೊಚ್ಚಿಗೆದ್ದ ಸ್ಥಳೀಯರು ಜಖಂಗೊಳಿಸಿ, ಗಾಜುಗಳನ್ನು ಒಡೆದು ಹಾಕಿ ಹಾಗೂ ಬೆಂಕಿ ಹಚ್ಚಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.