ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹೈಕೋರ್ಟ್ ವಕೀಲ ಶಶಿಧರ ಬೆಳಗುಂಬ, ‘ಮೈಸೂರು ಒಡೆಯರ್ ಕಾಲದಲ್ಲಿ ಈಗ್ಗೆ 200 ವರ್ಷಗಳ ಹಿಂದೆ ಚಾಮರಾಜಪೇಟೆಯನ್ನು ಅಭಿವೃದ್ಧಿಪಡಿಸಲಾಯಿತು. ಆಗ 1860ರಲ್ಲಿ ಎಂ.ಮುತ್ತೋಜಿ ರಾವ್ ಶಿಂಧೆ ಎಂಬುವರು ಪಶು ವೈದ್ಯಕೀಯ ಮತ್ತು ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಈ ಜಾಗವನ್ನು ದಾನವಾಗಿ ನೀಡಿದ್ದರು. ಇಂತಹ ಜಾಗವು ಅನೂಚಾನವಾಗಿ ಪಶು ಸಂಗೋಪನೆ ಇಲಾಖೆಯ ಸುಪರ್ದಿಯಲ್ಲಿದ್ದು, ಈಗ ಇದನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರ ಮಾಡಿರುವ ಸರ್ಕಾರದ ನಿರ್ಧಾರ ದಾನ ನೀಡಿದವರ ಇಚ್ಛೆಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.