ಜನಾಂದೋಲನಗಳ ಮಹಾಮೈತ್ರಿ ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಯ ಜಾಥಾಗಳ ಸಮಾಗಮ ಸತ್ಯಾಗ್ರಹ ಸಮಾವೇಶ’ದಲ್ಲಿ ಅವರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ, ಎಸ್.ಆರ್. ಹಿರೇಮಠ, ಸಿ. ಯತಿರಾಜು, ಟಿ.ಆರ್. ಚಂದ್ರಶೇಖರ್ ಮತ್ತು ದಿಲೀಪ್ ಕಾಮತ್ ಬರೆದ ‘ಮೂರು ಕರಾಳ ಕೃಷಿ ಕಾಯಿದೆಗಳು ಮತ್ತು ಸರ್ಕಾರವನ್ನು ಕಿತ್ತೊಗೆಯುವ ಜನತೆಯ ಹಕ್ಕು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.