‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸುಮಾರು 15 ವರ್ಷದ ಹಿಂದೆಯೇ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಡಕನಹಳ್ಳಿ, ತಾಂಡ್ಯ, ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ರೈತರಿಗೆ ಕೈಗಾರಿಕೆಗಳಲ್ಲಿ ಕಾಯಂ ಉದ್ಯೋಗ ನೀಡಿಲ್ಲ’ ಎಂದು ಆರೋಪಿಸಿದರು.