ಅವರ ಎದುರು ಈಗ ಲಖನೌ ತಂಡದಲ್ಲಿರುವ ಸ್ಪೋಟಕ ಶೈಲಿಯ ಬ್ಯಾಟರ್ಗಳನ್ನು ಕಟ್ಟಿಹಾಕುವ ಸವಾಲು ಇದೆ. ಅದರಲ್ಲೂ ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯಿನಿಸ್, ನಿಕೊಲಸ್ ಪೂರನ್ ಮತ್ತು ಕೆ.ಎಲ್. ರಾಹುಲ್ ಅವರನ್ನು ನಿಯಂತ್ರಿಸಬೇಕಿದೆ. ಕೋಲ್ಕತ್ತ ತಂಡದ ಬ್ಯಾಟಿಂಗ್ ಕೂಡ ಬಲಿಷ್ಟವಾಗಿದೆ. ಕಳೆದ ಪಂದ್ಯದಲ್ಲಿ ತಂಡವು 57 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಮನೀಷ್ ಪಾಂಡೆ, ವೆಂಕಟೇಶ್ ಅಯ್ಯರ್ ಅವರು ಮಿಂಚಿದ್ದರು. ಹೋರಾಟದ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.