ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆ

Last Updated 14 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹೃದಯವೊಂದು ತಳವೊಡೆದ ದೋಣಿ
ಯಾವಾಗ ಮುಳುಗುವುದೊ ಬಲ್ಲವರಾರು?
ನೂರು ಸಲ ತೀಡಿ ಕಾಡಿಗೆ ಹಚ್ಚಬೇಡ
ಎಲ್ಲ ಪ್ರೇಮಗಳು ಅಮರ ಎಂದವರಾರು?
ಹೃದಯ ಇರುವತನಕ ಅನುರಾಗ ಸಹಜ
ಕಂಗಳಿರುವತನಕ ಕಂಬನಿ ಇಲ್ಲೆಂದವರಾರು?
ಬೇಸರ ಮತ್ತು ಏಕಾಂತ ಜೀವದ ಗೆಳೆಯರು
ನಂಬುಗೆಯ ನೇಹಿಗರನು ಅಗಲಿಸಿದವರಾರು?
ಮಧುಶಾಲೆಯ ಮುಂದೆ ಭಾಷಣ ಬಿಗಿದವರೇ
ಸುಟ್ಟ ಹೃದಯಕೆ ಸಾಂತ್ವಾನ ನೀಡುವವರಾರು?
ಬಜಾರಿನಲಿ ಬಿಕರಿಗಿವೆ ನೂರಾರು ಕನಸುಗಳು
ಕರ್ಪ್ಯೂ ವಿಧಿಸಿದ ಶಹರದಲಿ ಕೊಳ್ಳುವವರಾರು?
ಅಮಲಿರುವತನಕ ನಾನು ನೀನು ಈ ಲೋಕವೆಲ್ಲಾ
ನಶೆಯಾರಿದ ಮೇಲೆ ಚೆಲುವು ಮೂಸುವವರಾರು?
ಮನ ಮನಸುಗಳ ನಡುವೆ ಸಂಶಯಾಗ್ನಿ ಗೆಳೆಯಾ
ಕೋವಿ ಇರುವ ತನಕ ಕೊಳಲ ಕೇಳುವವರಾರು?
ದತ್ತು ತೆಗೆದುಕೊಳ್ಳುವವರಿಲ್ಲ ದುಗುಡವನು ರಾಜಾ
ಈ ಶಹರಿನಲಿ ಗಿರಾಕಿಯನು ಹುಡುಕುವವರಾರು?

ಮುಳ್ಳಿಲ್ಲದ ಗುಲಾಬಿ ಬೆಳೆದವರಾರು?

ನೋವಿಲ್ಲದ ಪ್ರೀತಿ ಪಡೆದವರಾರು?
-ಅನಾಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT