ಸಂಪನ್ಮೂಲ ಕ್ರೋಢೀಕರಣ, ಅನವಶ್ಯಕ ಖರ್ಚುಗಳ ತಡೆಗೆ ಕ್ರಮ ಹಾಗೂ ಪಾಲಿಕೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಬ್ಬಂದಿ ಕೊರತೆ, ಪಾಲಿಕೆ ಆಸ್ಪತ್ರೆಗಳು, ಆಟದ ಮೈದಾನ, ಜಾಹೀರಾತು, ಕಾನೂನು ವಿಭಾಗ, ಘನತ್ಯಾಜ್ಯ ವಿಲೇವಾರಿ, ಕಾಮಗಾರಿಗಳು ಪಾಲಿಕೆಯ ಮತ್ತಿತರ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.