ಇಷ್ಟಕ್ಕೆಲ್ಲ ಕಾರಣ ಸರ್ಕಾರಗಳು ಈರುಳ್ಳಿ ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಿಸದಿರುವುದು, ಈರುಳ್ಳಿಯ ಬಂಪರ್ ಬೆಳೆ ಬಂದಾಗ ತಕ್ಷಣ ರಫ್ತು ಮಾಡುವುದು,
ಉತ್ಪಾದನೆ ಕುಂಠಿತವಾಗುವ ಮುನ್ಸೂಚನೆ ಸಿಗುತ್ತಲೇ ಆಮದು ಮಾಡಿಕೊಂಡು ದೇಶಿ ವಹಿವಾಟಿನಲ್ಲಿ ಸಮತೋಲನ ಸಾಧಿಸಿದರೆ ಮಾರುಕಟ್ಟೆಯಲ್ಲಿ ರೈತರು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲವಾಗುವಂತಹ ಮಾದರಿ ಬೆಲೆಯನ್ನು ಕಾಯ್ದುಕೊಳ್ಳಬಹುದು. ಆಮದು, ರಫ್ತು ವ್ಯವಸ್ಥಿತ ಹಾಗೂ ಮುಂದಾಲೋಚನೆಯಿಂದ ಕೂಡಿದ್ದರೆ ಈರುಳ್ಳಿ ಯಾರ ಕಣ್ಣಲ್ಲೂ ನೀರು ತರಿಸದು.