ಬೆಂಗಳೂರು: ‘ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಪ್ರಚಾರ ಕಾರ್ಯಕ್ಕೂ ಅವರು ಬರಲಿದ್ದಾರೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನಗರ, ಕನಕಪುರ ಎರಡೂ ಕಡೆ ಪ್ರಚಾರ ಕೈಗೊಳ್ಳುವ ವಿಷಯವನ್ನು ಬಹಿರಂಗ ಸಭೆಯಲ್ಲಿ ಸಿಂಧ್ಯಾ ಅವರೇ ಪ್ರಕಟಿಸಿದ್ದಾರೆ.