<p>ಸುಮಾರು 12 ಶತಮಾನಗಳ ಹಿಂದೆ ಯಜಮಾನನನ್ನು ರಕ್ಷಿಸಿ ತಾನು ಪ್ರಾಣಬಿಟ್ಟ `ಕಾಳಿ'ಯ ಕಥೆಯಿದು. ರಾಷ್ಟ್ರಕೂಟ ಚಕ್ರೇಶ್ವರ ಮುಮ್ಮಡಿ ಕೃಷ್ಣನ ಅಚ್ಚುಮೆಚ್ಚಿನ ನಾಯಿ ಕಾಳಿ. ಯಜಮಾನನಿಗಾಗಿ ವೀರ ಮರಣಹೊಂದಿದ ನಿಮಿತ್ತ ಸ್ಥಾಪನೆಗೊಂಡ ಇದರ ವೀರಗಲ್ಲು ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಅತಕೂರಿನಿಂದ ಈಗ ಬೆಂಗಳೂರಿನ ವಸ್ತುಸಂಗ್ರಹಾಲಯ ಸೇರಿದೆ. ಇತಿಹಾಸ ನೆನಪಿಸುತ್ತಿದೆ.</p>.<p>ತನ್ನ ಆಪ್ತ ಗಂಗ ದೊರೆ ಇಮ್ಮಡಿ ಬೂತುಗನ ಬಲಗೈ ಬಂಟನಾದ ಗಂಗ ದಂಡನಾಯಕ ಮಣಲೇರನಿಗೆ ಕಾಣಿಕೆ ರೂಪದಲ್ಲಿ ಕಾಳಿಯನ್ನು ನೀಡಿದ್ದ ಮುಮ್ಮಡಿ ಕೃಷ್ಣ. ಕಾಣಿಕೆ ರೂಪದಲ್ಲಿ ಬಂದ ಈ ಶ್ವಾನ ಮುಂದೊಂದು ದಿನ ತನಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತದೆ ಎಂಬ ಅರಿವೂ ಇರಲಿಲ್ಲ ಮಣಲೇರನಿಗೆ. ಇದರ ಫಲವೇ ಕಾಳಿಯ ವೀರಗಲ್ಲು.</p>.<p><strong>ಕಾಳಿಯನ್ನು ನೀಡಿದ್ದೇಕೆ?</strong><br /> ಕ್ರಿ.ಶ. 949ರ ಕಾಲವದು. ಮುಮ್ಮಡಿ ಕೃಷ್ಣನ ಆಳ್ವಿಕೆಯ ಅವಧಿ. ಚೋಳ ದೇಶದ ಮೇಲೇರಿ ಕಾಂಚೀಪುರ ಮತ್ತು ಚೋಳ ರಾಜಧಾನಿ ತಂಜಾವೂರುಗಳನ್ನು ಆಕ್ರಮಿಸಿ ಸದೆಬಡಿಯುವಲ್ಲಿ ಕೃಷ್ಣ ಯಶ ಸಾಧಿಸಿದ್ದ. ಚೋಳರ ಈ ಸೋಲು ಮುಂದಿನ ನಾಲ್ಕು ದಶಕಗಳ ಕಾಲ ಅವರು ತಲೆಯೆತ್ತದಂತೆ ಮಾಡಿತು. ರಾಷ್ಟ್ರಕೂಟ ಸೈನ್ಯವು ಇಡೀ ತಮಿಳು ನಾಡನ್ನು ವಶಪಡಿಸಿಕೊಂಡು, ರಾಮೇಶ್ವರದಲ್ಲಿ ಕೃಷ್ಣನ ಜಯಸ್ತಂಭವನ್ನು ನಿಲ್ಲಿಸಿತು. ಈ ಗೆಲುವಿಗೆ ಕಾರಣೀಕರ್ತನಾದವನು ಬೂತುಗ ಹಾಗೂ ಮಣಲೇರ. </p>.<p>ಇದರಿಂದ ಸಂತುಷ್ಟನಾದ ಕೃಷ್ಣ ಕಾಣಿಕೆ ನೀಡಲು ಮುಂದಾದಾಗ, ತನಗೆ `ಕಾಳಿ'ಯನ್ನು ನೀಡುವಂತೆ ಮಣಲೇರ ಕೋರಿದ. ಭೂಮಿ, ಚಿನ್ನ, ಆಭರಣ ಯಾವುದಕ್ಕೂ ಆಸೆ ಪಡದೆ ಕಾಳಿಯನ್ನು ಕೋರಿದ ಮಣಲೋಕನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕೃಷ್ಣ, ಅವನ ಆಸೆ ನೆರವೇರಿಸಿದ. ಹಾಗೆಯೇ, ಬೂತುಗನು ಕೂಡ ಮಣಲೇರನಿಗೆ ಬೆಳ್ತೊಲದ ಎಂದರೆ ಈಗಿನ ಮಂಡ್ಯ ಜಿಲ್ಲೆಯ `ಅತಕೂರು ಪನ್ನೆರಡು' ಪ್ರದೇಶವನ್ನು ಬಿಟ್ಟು ಕೊಟ್ಟ.</p>.<p><strong>ಹೆಚ್ಚಿದ ಹಂದಿಯ ಉಪಟಳ</strong><br /> ಒಮ್ಮೆ ಅತಕೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿ, ಬೆಳೆಗಳ ನಾಶಕ್ಕೆ ತೊಡಗಿತು. ಅವುಗಳ ನಾಶಕ್ಕೆ ಮಣಲೇರನು ಕಾಳಿಯೊಡನೆ ಹಂದಿಗಳ ಬೇಟೆಗೆ ಹೊರಟ.</p>.<p>ಅಗ ಭಾರೀ ಗಾತ್ರದ ಕಾಡು ಹಂದಿಯೊಂದು ಧುತ್ತೆಂದು ಮಣಲೇರ ಮತ್ತು ಕಾಳಿಯ ಮುಂದೆ ದಾರಿಗಡ್ಡವಾಗಿ ನಿಂತಿತು. ಕಾಳಿ ಮತ್ತು ಹಂದಿಯ ನಡುವೆ ನಡೆದ ಭೀಕರ ಹೋರಾಟದಲ್ಲಿ ಕಾಳಿಯು ಹಂದಿಯನ್ನು ಕೊಂದುಹಾಕಿತಾದರೂ, ತೀವ್ರವಾಗಿ ಗಾಯಗೊಂಡ ಕಾರಣ ಕೊನೆಯುಸಿರೆಳೆಯಿತು, ತನ್ನ ಯಜಮಾನನಿಗಾಗಿ ಪ್ರಾಣ ಬಿಟ್ಟಿತು!</p>.<p>ಮಣಲೇರನಿಗೆ ದುಃಖ ಸಹಿಸಲಾಗಲಿಲ್ಲ. ತನ್ನನ್ನು ಕಾಪಾಡಿದ ಕಾಳಿಗೆ ಏನಾದರೂ ಗೌರವ ಸಲ್ಲಿಸಲೇಬೇಕೆಂದು ಅಂದುಕೊಂಡ. ಸ್ವಾಮಿ ನಿಷ್ಠೆ ಮೆರೆದ ಕಾಳಿಯ ಮೇಲಿನ ಗೌರವ, ಪ್ರೀತಿಗಳಿಂದ ಆತ ತನ್ನ ಆಡಳಿತ ಪ್ರದೇಶವಾದ ಅತಕೂರಿನ ಪ್ರಸಿದ್ಧ `ಚಲ್ಲಲಿಂಗೇಶ್ವರ ಸ್ವಾಮಿ' ದೇವಾಲಯದ ಬಳಿ ನಾಯಿಯ ಸಮಾಧಿಯನ್ನು ನಿರ್ಮಿಸಿದ. ಹಾಗೆಯೇ, ಅದಕ್ಕೊಂದು ವೀರಗಲ್ಲನ್ನು ನೆಡಿಸಿ ಶಾಸನ ಹಾಕಿಸಿದ.</p>.<p>ವೀರಗಲ್ಲನ್ನು ಪ್ರತಿ ನಿತ್ಯ ಪೂಜಿಸಲು ಒಬ್ಬ ಗೊರವನನ್ನು ನೇಮಿಸಿದ. ಶಾಸನದಲ್ಲಿ `ಕಾಳಿಯನ್ನು ಪೂಜಿಸದೆ ಊಟ ಮಾಡಿದರೆ ನಾಯಿ ಕೊಂದ ಶಾಪ ತಟ್ಟುವುದು' ಎಂಬ ಮಾತು ಕೂಡ ಇದೆ. ಈ ವೀರಗಲ್ಲನ್ನು ಈಗ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.</p>.<p>ಹಂದಿಯೊಂದಿಗಿನ ಸೆಣಸಾಟ, ಹೊಡೆತ ತಪ್ಪಿಸಿಕೊಳ್ಳಲು ಹೆಣಗಾಟ, ಕೋಪದಿಂದ ಕೆರಳಿರುವ ನಾಯಿ- ಹಂದಿ ಮುಂತಾದ ದೃಶ್ಯಗಳು ವೀರಗಲ್ಲಿನ ಮೇಲೆ ಕೆತ್ತಲಾಗಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಉಗ್ರವಾಗಿ ಕಾದಾಡುತ್ತಿರುವ ಉಬ್ಬು ಚಿತ್ರವೂ ಸಹ ಜೀವಕಳೆಯಿಂದ ಕೂಡಿ ಹೃನ್ಮನಗಳನ್ನಾಕರ್ಷಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಮಾರು 12 ಶತಮಾನಗಳ ಹಿಂದೆ ಯಜಮಾನನನ್ನು ರಕ್ಷಿಸಿ ತಾನು ಪ್ರಾಣಬಿಟ್ಟ `ಕಾಳಿ'ಯ ಕಥೆಯಿದು. ರಾಷ್ಟ್ರಕೂಟ ಚಕ್ರೇಶ್ವರ ಮುಮ್ಮಡಿ ಕೃಷ್ಣನ ಅಚ್ಚುಮೆಚ್ಚಿನ ನಾಯಿ ಕಾಳಿ. ಯಜಮಾನನಿಗಾಗಿ ವೀರ ಮರಣಹೊಂದಿದ ನಿಮಿತ್ತ ಸ್ಥಾಪನೆಗೊಂಡ ಇದರ ವೀರಗಲ್ಲು ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಅತಕೂರಿನಿಂದ ಈಗ ಬೆಂಗಳೂರಿನ ವಸ್ತುಸಂಗ್ರಹಾಲಯ ಸೇರಿದೆ. ಇತಿಹಾಸ ನೆನಪಿಸುತ್ತಿದೆ.</p>.<p>ತನ್ನ ಆಪ್ತ ಗಂಗ ದೊರೆ ಇಮ್ಮಡಿ ಬೂತುಗನ ಬಲಗೈ ಬಂಟನಾದ ಗಂಗ ದಂಡನಾಯಕ ಮಣಲೇರನಿಗೆ ಕಾಣಿಕೆ ರೂಪದಲ್ಲಿ ಕಾಳಿಯನ್ನು ನೀಡಿದ್ದ ಮುಮ್ಮಡಿ ಕೃಷ್ಣ. ಕಾಣಿಕೆ ರೂಪದಲ್ಲಿ ಬಂದ ಈ ಶ್ವಾನ ಮುಂದೊಂದು ದಿನ ತನಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತದೆ ಎಂಬ ಅರಿವೂ ಇರಲಿಲ್ಲ ಮಣಲೇರನಿಗೆ. ಇದರ ಫಲವೇ ಕಾಳಿಯ ವೀರಗಲ್ಲು.</p>.<p><strong>ಕಾಳಿಯನ್ನು ನೀಡಿದ್ದೇಕೆ?</strong><br /> ಕ್ರಿ.ಶ. 949ರ ಕಾಲವದು. ಮುಮ್ಮಡಿ ಕೃಷ್ಣನ ಆಳ್ವಿಕೆಯ ಅವಧಿ. ಚೋಳ ದೇಶದ ಮೇಲೇರಿ ಕಾಂಚೀಪುರ ಮತ್ತು ಚೋಳ ರಾಜಧಾನಿ ತಂಜಾವೂರುಗಳನ್ನು ಆಕ್ರಮಿಸಿ ಸದೆಬಡಿಯುವಲ್ಲಿ ಕೃಷ್ಣ ಯಶ ಸಾಧಿಸಿದ್ದ. ಚೋಳರ ಈ ಸೋಲು ಮುಂದಿನ ನಾಲ್ಕು ದಶಕಗಳ ಕಾಲ ಅವರು ತಲೆಯೆತ್ತದಂತೆ ಮಾಡಿತು. ರಾಷ್ಟ್ರಕೂಟ ಸೈನ್ಯವು ಇಡೀ ತಮಿಳು ನಾಡನ್ನು ವಶಪಡಿಸಿಕೊಂಡು, ರಾಮೇಶ್ವರದಲ್ಲಿ ಕೃಷ್ಣನ ಜಯಸ್ತಂಭವನ್ನು ನಿಲ್ಲಿಸಿತು. ಈ ಗೆಲುವಿಗೆ ಕಾರಣೀಕರ್ತನಾದವನು ಬೂತುಗ ಹಾಗೂ ಮಣಲೇರ. </p>.<p>ಇದರಿಂದ ಸಂತುಷ್ಟನಾದ ಕೃಷ್ಣ ಕಾಣಿಕೆ ನೀಡಲು ಮುಂದಾದಾಗ, ತನಗೆ `ಕಾಳಿ'ಯನ್ನು ನೀಡುವಂತೆ ಮಣಲೇರ ಕೋರಿದ. ಭೂಮಿ, ಚಿನ್ನ, ಆಭರಣ ಯಾವುದಕ್ಕೂ ಆಸೆ ಪಡದೆ ಕಾಳಿಯನ್ನು ಕೋರಿದ ಮಣಲೋಕನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕೃಷ್ಣ, ಅವನ ಆಸೆ ನೆರವೇರಿಸಿದ. ಹಾಗೆಯೇ, ಬೂತುಗನು ಕೂಡ ಮಣಲೇರನಿಗೆ ಬೆಳ್ತೊಲದ ಎಂದರೆ ಈಗಿನ ಮಂಡ್ಯ ಜಿಲ್ಲೆಯ `ಅತಕೂರು ಪನ್ನೆರಡು' ಪ್ರದೇಶವನ್ನು ಬಿಟ್ಟು ಕೊಟ್ಟ.</p>.<p><strong>ಹೆಚ್ಚಿದ ಹಂದಿಯ ಉಪಟಳ</strong><br /> ಒಮ್ಮೆ ಅತಕೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿ, ಬೆಳೆಗಳ ನಾಶಕ್ಕೆ ತೊಡಗಿತು. ಅವುಗಳ ನಾಶಕ್ಕೆ ಮಣಲೇರನು ಕಾಳಿಯೊಡನೆ ಹಂದಿಗಳ ಬೇಟೆಗೆ ಹೊರಟ.</p>.<p>ಅಗ ಭಾರೀ ಗಾತ್ರದ ಕಾಡು ಹಂದಿಯೊಂದು ಧುತ್ತೆಂದು ಮಣಲೇರ ಮತ್ತು ಕಾಳಿಯ ಮುಂದೆ ದಾರಿಗಡ್ಡವಾಗಿ ನಿಂತಿತು. ಕಾಳಿ ಮತ್ತು ಹಂದಿಯ ನಡುವೆ ನಡೆದ ಭೀಕರ ಹೋರಾಟದಲ್ಲಿ ಕಾಳಿಯು ಹಂದಿಯನ್ನು ಕೊಂದುಹಾಕಿತಾದರೂ, ತೀವ್ರವಾಗಿ ಗಾಯಗೊಂಡ ಕಾರಣ ಕೊನೆಯುಸಿರೆಳೆಯಿತು, ತನ್ನ ಯಜಮಾನನಿಗಾಗಿ ಪ್ರಾಣ ಬಿಟ್ಟಿತು!</p>.<p>ಮಣಲೇರನಿಗೆ ದುಃಖ ಸಹಿಸಲಾಗಲಿಲ್ಲ. ತನ್ನನ್ನು ಕಾಪಾಡಿದ ಕಾಳಿಗೆ ಏನಾದರೂ ಗೌರವ ಸಲ್ಲಿಸಲೇಬೇಕೆಂದು ಅಂದುಕೊಂಡ. ಸ್ವಾಮಿ ನಿಷ್ಠೆ ಮೆರೆದ ಕಾಳಿಯ ಮೇಲಿನ ಗೌರವ, ಪ್ರೀತಿಗಳಿಂದ ಆತ ತನ್ನ ಆಡಳಿತ ಪ್ರದೇಶವಾದ ಅತಕೂರಿನ ಪ್ರಸಿದ್ಧ `ಚಲ್ಲಲಿಂಗೇಶ್ವರ ಸ್ವಾಮಿ' ದೇವಾಲಯದ ಬಳಿ ನಾಯಿಯ ಸಮಾಧಿಯನ್ನು ನಿರ್ಮಿಸಿದ. ಹಾಗೆಯೇ, ಅದಕ್ಕೊಂದು ವೀರಗಲ್ಲನ್ನು ನೆಡಿಸಿ ಶಾಸನ ಹಾಕಿಸಿದ.</p>.<p>ವೀರಗಲ್ಲನ್ನು ಪ್ರತಿ ನಿತ್ಯ ಪೂಜಿಸಲು ಒಬ್ಬ ಗೊರವನನ್ನು ನೇಮಿಸಿದ. ಶಾಸನದಲ್ಲಿ `ಕಾಳಿಯನ್ನು ಪೂಜಿಸದೆ ಊಟ ಮಾಡಿದರೆ ನಾಯಿ ಕೊಂದ ಶಾಪ ತಟ್ಟುವುದು' ಎಂಬ ಮಾತು ಕೂಡ ಇದೆ. ಈ ವೀರಗಲ್ಲನ್ನು ಈಗ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.</p>.<p>ಹಂದಿಯೊಂದಿಗಿನ ಸೆಣಸಾಟ, ಹೊಡೆತ ತಪ್ಪಿಸಿಕೊಳ್ಳಲು ಹೆಣಗಾಟ, ಕೋಪದಿಂದ ಕೆರಳಿರುವ ನಾಯಿ- ಹಂದಿ ಮುಂತಾದ ದೃಶ್ಯಗಳು ವೀರಗಲ್ಲಿನ ಮೇಲೆ ಕೆತ್ತಲಾಗಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಉಗ್ರವಾಗಿ ಕಾದಾಡುತ್ತಿರುವ ಉಬ್ಬು ಚಿತ್ರವೂ ಸಹ ಜೀವಕಳೆಯಿಂದ ಕೂಡಿ ಹೃನ್ಮನಗಳನ್ನಾಕರ್ಷಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>