<p>ಆ ಸಂಜೆ<br /> ಅವರು ಲೆಕ್ಕದ ಬುಕ್ಕುಗಳನ್ನು ನೋಡಿದರು;<br /> ಸದರಿ ಕ್ರಿಯೆ ಕೂಡ ಸವಕಲು<br /> ಕವಿಸಮಯವಿರಬೇಕೆಂದು ನಕ್ಕರು.</p>.<p>ಲವಾಜಮೆ, ವಿಮೆಗಳ ಮೇಲೆ ಅಡ್ಡಾಡಿದ ಆ ಕಣ್ಣು<br /> ಅಲ್ಲೆಲ್ಲೂ ನಿಲ್ಲುತ್ತಿರಲಿಲ್ಲ;<br /> ನಿಜ ಹೇಳಬೇಕೆಂದರೆ<br /> ರೊಕ್ಕದ ಮೇಲೆ ಆ ಕಣ್ಣು ಅಷ್ಟಾಗಿ ಕೂರುತ್ತಿರಲಿಲ್ಲ;<br /> ಜೊತೆಗೆ, ತಾವು ನೋಡುತ್ತಿರುವುದು ಏನೆಂಬುದರ ಬಗ್ಗೆ<br /> ಅವರಿಗೇ ಖಾತ್ರಿಯಿರಲಿಲ್ಲ.<br /> `ಐವತ್ತು ಕಳೆದರೂ ಐವತ್ತು ಉಳಿದಿತ್ತು'<br /> ಎಂದು ನಿಟ್ಟುಸಿರಿಟ್ಟ `ಹೂಕವಿ'ಯ ಆರಾಮು ಕೂಡ ಅಲ್ಲಿರಲಿಲ್ಲ.</p>.<p>ಮುಸ್ಸಂಜೆ ದಿಬ್ಬದ ಮೇಲೆ ನಿಂತವರಿಗೆ<br /> `ನಡೆದು ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸಬೇಡ'<br /> ಎಂದ ಅಡಿಗರ ಅಡಿಗೆರಗಿ ಮುತ್ತಿಕ್ಕಬೇಕೆನಿಸಿತು.<br /> ಇಂಥ ನೂರಾರು ಪ್ರತಿಮೆಗಳು ತಮ್ಮಳಗೆ<br /> ಅನುದಿನವು ನುಡಿಯುವುದು ನೆನಪಾಗಿ<br /> ಮೊದಲೇ ಬಾಗಿದ್ದ ಕತ್ತು ಮತ್ತಷ್ಟು ಬಾಗಿತು;<br /> ಇಂಥ ಕವಿಸಾಲುಗಳನ್ನು ನಿತ್ಯ ನುಡಿಸಿದ್ದರ ಬಗ್ಗೆ<br /> ಸಣ್ಣ ಪುಳಕವಿತ್ತು ಹಾಗೂ ವಿನಯವಿತ್ತು.</p>.<p>ಈತನಕ ನಡೆದ ಹಾದಿಯ ತಿರುವುಗಳು<br /> ಕಾಣದಿದ್ದರೇನಂತೆ,<br /> ತಾವು ಊರೂರ ತೋಟಗಳಲ್ಲಿ ಒಗೆದ ಬೀಜಗಳು ಸಸಿಯಾಗಿ<br /> ಮರವಾಗಿ ಎಂತೆಂಥ ಹಣ್ಣು ಬಿಟ್ಟಿರಬಹುದೆಂದು<br /> ನೋಡಿ ಬರುವ ಕುತೂಹಲ ಕೂಡ ಅವರಲ್ಲಿರಲಿಲ್ಲ;<br /> ತಮ್ಮ ಮಾತುಗಳನ್ನು ಗಿಳಿಗಳ ಹಾಗೆ ಉಲಿದವರ ಬಗ್ಗೆ<br /> ಹೆಮ್ಮೆ ಕೂಡ ಇದ್ದಂತಿರಲಿಲ್ಲ;<br /> ಇದ್ದರೂ ಅದು ಎದ್ದು ಕಾಣುವಂತಿರಲಿಲ್ಲ.</p>.<p>ತಾವು ಕ್ಲಾಸುಗಳಲ್ಲಿ ಹಾದಿಬೀದಿಗಳಲ್ಲಿ<br /> ಬಾರು ಗಡಂಗುಗಳಲ್ಲಿ<br /> ಚಿಮುಕಿಸಿದ ಬೇಂದ್ರೆ ಅಡಿಗ ಪಂಪ ಲಂಕೇಶ ದೇವನೂರು<br /> ನೂರಾರು ಎದೆಗಳಲ್ಲಿ ತೊರೆಯಾಗಿ ಹರಿದಿರಬಹುದೆಂಬ<br /> ಧನ್ಯತೆಯ ಎಳೆ ಕೂಡ ಅಲ್ಲಿ ಹೆಚ್ಚಿಗಿರಲಿಲ್ಲ;<br /> ತಮ್ಮಿಂದ ಪಡೆದವರು ಸೂಚಿಸಿದ ಧನ್ಯತೆಗೆ<br /> ಒಂದು ಸಣ್ಣ ಕಣ್ಣು ಮಿಟುಕಿಗಿಂತ<br /> ಹೆಚ್ಚಿನ ಉತ್ತರ ಅವರಲ್ಲಿರಲಿಲ್ಲ.<br /> ಹಾಗೆ ನೋಡಿದರೆ,<br /> ಹೀಗೊಂದು ದಿನ ಕೂತು<br /> ಜುಜುಬಿ ಲೆಕ್ಕದ ಬುಕ್ಕುಗಳನ್ನು ನೋಡುವುದು ಕೂಡ<br /> ಅವರ ಇರಾದೆಯಾಗಿರಲಿಲ್ಲ.</p>.<p>ಸಂಜೆಗೆಂಪೆಲ್ಲ ಚದುರಿ ಮಬ್ಬು ನೆಲಕ್ಕಿಳಿದಾಗ<br /> ಒಳಗು ಬೆಳಗಲೆಂದು ಒಂದೆರಡು ಲಾರ್ಜ್ ಇಳಿಸಿ<br /> ಛಾರ್ಜಾಗುವ ದಿನಚರಿ ಕೂಡ ಅವತ್ತು ಮಜವೆನ್ನಿಸಲಿಲ್ಲ;</p>.<p>ಜಾರುತ್ತಿದ್ದ ಪ್ಯಾಂಟನ್ನು ಎರಡೂ ಕೈಯಿಂದ<br /> ಸೊಂಟಕ್ಕೆಳೆದುಕೊಳ್ಳುತ್ತಾ ಸುಮ್ಮನೆ ಸಾಗಿ ಸರ್ಕಲಿನಲ್ಲಿ<br /> ನಿಲ್ಲುವುದು ಕೂಡ ಅವರ ಪಾಲಿಗೆ ಅಂಥ ಸಂಕೇತವೇನಾಗಿರಲಿಲ್ಲ;<br /> ಕಾರಣ, ಅವರು ಒಪ್ಪುವ ಕವಿಗಳು<br /> ಇಷ್ಟು ಆರಾಮದ ಸಂಕೇತಗಳನ್ನು ಎಂದೂ ಬಳಸುತ್ತಿರಲಿಲ್ಲ.</p>.<p>ದಿನ ರಾತ್ರಿ ಸಂಕೇತಗೊಳದಲ್ಲಿ ಮುಳುಗೇಳುತ್ತಾ<br /> ಕೀರಂ ತಾವೇ ಸಂಕೇತವಾದದ್ದನ್ನು ಜನ ಗಮನಿಸಿರಲಿಕ್ಕಿಲ್ಲ:<br /> ಅವರು ಸಂಕೇತವಾದದ್ದು-<br /> ಓದಿನ ಸೀಮೋಲ್ಲಂಘನಕ್ಕೆ, ಅದ್ಭುತ ಅಂತರ್ಪಠ್ಯೀಯತೆಗೆ,<br /> ಕಾವ್ಯಸಂಭ್ರಮಕ್ಕೆ, ಹೆಣ್ತನದ ಮಡಿಲಿಗೆ,<br /> ಕೊಡುವುದಕ್ಕೆ, ಹಂಚುವುದಕ್ಕೆ,<br /> ಪೂರ್ವಪಶ್ಚಿಮಗಳನ್ನು ಬೆಸೆದು ಪಡೆದ ಪಾಂಡಿತ್ಯಕ್ಕೆ,<br /> ಸ್ವಾರ್ಥವಿಲ್ಲದ ಸಾಹಿತ್ಯಜಗಳಕ್ಕೆ.</p>.<p>ಇಷ್ಟೆಲ್ಲ ಆಡುತ್ತ ಆಡುತ್ತ ಕೀರಂ ಕಾಯುತ್ತಲೇ ಇರುತ್ತಾರೆ<br /> ನಾಗಲಿಂಗಯೋಗಿಯ ಹಾಗೆ ತಿರುಗುತ್ತಲೇ ಇರುತ್ತಾರೆ<br /> ಪ್ರತಿಮೆ ರೂಪಕ ಸಂಕೇತಗಳ ಸಂಗದಲ್ಲಿ ಮಾತ್ರವೇ<br /> ಮೂಡುವ ಆ ದಿವ್ಯ ಅರಿವಿಗಾಗಿ...</p>.<p>ಹೀಗೆ ಸದಾ ಅರಿವಿನ ಇರುವಲ್ಲಿರುವ ಕೀರಂ<br /> ಇನ್ನಿಲ್ಲವೆಂದು ತಿಳಿದವರು<br /> ಕಾವ್ಯದ ಕಣ್ಣು ಕಳಕೊಂಡು ಮುಕ್ಕಾಗುತ್ತಾರೆ:</p>.<p>ಕಾವ್ಯಮಂಡಲ ಬಿಟ್ಟು ಕೀರಂ ಇನ್ನೆಲ್ಲಿ ಹೋಗುತ್ತಾರೆ?<br /> ಇಲ್ಲೇ ಎಲ್ಲೋ ಕನ್ನಡ ಕಾವ್ಯಮಂಡಲದಲ್ಲಿ<br /> ಎಡೆಬಿಡದೆ ತಿರುಗುತ್ತಲೇ ಇರುತ್ತಾರೆ;<br /> ನಮ್ಮ ಆತ್ಮಗಳನ್ನು ಗರಗರ ತಿರುಗಿಸುತ್ತಲೇ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ ಸಂಜೆ<br /> ಅವರು ಲೆಕ್ಕದ ಬುಕ್ಕುಗಳನ್ನು ನೋಡಿದರು;<br /> ಸದರಿ ಕ್ರಿಯೆ ಕೂಡ ಸವಕಲು<br /> ಕವಿಸಮಯವಿರಬೇಕೆಂದು ನಕ್ಕರು.</p>.<p>ಲವಾಜಮೆ, ವಿಮೆಗಳ ಮೇಲೆ ಅಡ್ಡಾಡಿದ ಆ ಕಣ್ಣು<br /> ಅಲ್ಲೆಲ್ಲೂ ನಿಲ್ಲುತ್ತಿರಲಿಲ್ಲ;<br /> ನಿಜ ಹೇಳಬೇಕೆಂದರೆ<br /> ರೊಕ್ಕದ ಮೇಲೆ ಆ ಕಣ್ಣು ಅಷ್ಟಾಗಿ ಕೂರುತ್ತಿರಲಿಲ್ಲ;<br /> ಜೊತೆಗೆ, ತಾವು ನೋಡುತ್ತಿರುವುದು ಏನೆಂಬುದರ ಬಗ್ಗೆ<br /> ಅವರಿಗೇ ಖಾತ್ರಿಯಿರಲಿಲ್ಲ.<br /> `ಐವತ್ತು ಕಳೆದರೂ ಐವತ್ತು ಉಳಿದಿತ್ತು'<br /> ಎಂದು ನಿಟ್ಟುಸಿರಿಟ್ಟ `ಹೂಕವಿ'ಯ ಆರಾಮು ಕೂಡ ಅಲ್ಲಿರಲಿಲ್ಲ.</p>.<p>ಮುಸ್ಸಂಜೆ ದಿಬ್ಬದ ಮೇಲೆ ನಿಂತವರಿಗೆ<br /> `ನಡೆದು ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸಬೇಡ'<br /> ಎಂದ ಅಡಿಗರ ಅಡಿಗೆರಗಿ ಮುತ್ತಿಕ್ಕಬೇಕೆನಿಸಿತು.<br /> ಇಂಥ ನೂರಾರು ಪ್ರತಿಮೆಗಳು ತಮ್ಮಳಗೆ<br /> ಅನುದಿನವು ನುಡಿಯುವುದು ನೆನಪಾಗಿ<br /> ಮೊದಲೇ ಬಾಗಿದ್ದ ಕತ್ತು ಮತ್ತಷ್ಟು ಬಾಗಿತು;<br /> ಇಂಥ ಕವಿಸಾಲುಗಳನ್ನು ನಿತ್ಯ ನುಡಿಸಿದ್ದರ ಬಗ್ಗೆ<br /> ಸಣ್ಣ ಪುಳಕವಿತ್ತು ಹಾಗೂ ವಿನಯವಿತ್ತು.</p>.<p>ಈತನಕ ನಡೆದ ಹಾದಿಯ ತಿರುವುಗಳು<br /> ಕಾಣದಿದ್ದರೇನಂತೆ,<br /> ತಾವು ಊರೂರ ತೋಟಗಳಲ್ಲಿ ಒಗೆದ ಬೀಜಗಳು ಸಸಿಯಾಗಿ<br /> ಮರವಾಗಿ ಎಂತೆಂಥ ಹಣ್ಣು ಬಿಟ್ಟಿರಬಹುದೆಂದು<br /> ನೋಡಿ ಬರುವ ಕುತೂಹಲ ಕೂಡ ಅವರಲ್ಲಿರಲಿಲ್ಲ;<br /> ತಮ್ಮ ಮಾತುಗಳನ್ನು ಗಿಳಿಗಳ ಹಾಗೆ ಉಲಿದವರ ಬಗ್ಗೆ<br /> ಹೆಮ್ಮೆ ಕೂಡ ಇದ್ದಂತಿರಲಿಲ್ಲ;<br /> ಇದ್ದರೂ ಅದು ಎದ್ದು ಕಾಣುವಂತಿರಲಿಲ್ಲ.</p>.<p>ತಾವು ಕ್ಲಾಸುಗಳಲ್ಲಿ ಹಾದಿಬೀದಿಗಳಲ್ಲಿ<br /> ಬಾರು ಗಡಂಗುಗಳಲ್ಲಿ<br /> ಚಿಮುಕಿಸಿದ ಬೇಂದ್ರೆ ಅಡಿಗ ಪಂಪ ಲಂಕೇಶ ದೇವನೂರು<br /> ನೂರಾರು ಎದೆಗಳಲ್ಲಿ ತೊರೆಯಾಗಿ ಹರಿದಿರಬಹುದೆಂಬ<br /> ಧನ್ಯತೆಯ ಎಳೆ ಕೂಡ ಅಲ್ಲಿ ಹೆಚ್ಚಿಗಿರಲಿಲ್ಲ;<br /> ತಮ್ಮಿಂದ ಪಡೆದವರು ಸೂಚಿಸಿದ ಧನ್ಯತೆಗೆ<br /> ಒಂದು ಸಣ್ಣ ಕಣ್ಣು ಮಿಟುಕಿಗಿಂತ<br /> ಹೆಚ್ಚಿನ ಉತ್ತರ ಅವರಲ್ಲಿರಲಿಲ್ಲ.<br /> ಹಾಗೆ ನೋಡಿದರೆ,<br /> ಹೀಗೊಂದು ದಿನ ಕೂತು<br /> ಜುಜುಬಿ ಲೆಕ್ಕದ ಬುಕ್ಕುಗಳನ್ನು ನೋಡುವುದು ಕೂಡ<br /> ಅವರ ಇರಾದೆಯಾಗಿರಲಿಲ್ಲ.</p>.<p>ಸಂಜೆಗೆಂಪೆಲ್ಲ ಚದುರಿ ಮಬ್ಬು ನೆಲಕ್ಕಿಳಿದಾಗ<br /> ಒಳಗು ಬೆಳಗಲೆಂದು ಒಂದೆರಡು ಲಾರ್ಜ್ ಇಳಿಸಿ<br /> ಛಾರ್ಜಾಗುವ ದಿನಚರಿ ಕೂಡ ಅವತ್ತು ಮಜವೆನ್ನಿಸಲಿಲ್ಲ;</p>.<p>ಜಾರುತ್ತಿದ್ದ ಪ್ಯಾಂಟನ್ನು ಎರಡೂ ಕೈಯಿಂದ<br /> ಸೊಂಟಕ್ಕೆಳೆದುಕೊಳ್ಳುತ್ತಾ ಸುಮ್ಮನೆ ಸಾಗಿ ಸರ್ಕಲಿನಲ್ಲಿ<br /> ನಿಲ್ಲುವುದು ಕೂಡ ಅವರ ಪಾಲಿಗೆ ಅಂಥ ಸಂಕೇತವೇನಾಗಿರಲಿಲ್ಲ;<br /> ಕಾರಣ, ಅವರು ಒಪ್ಪುವ ಕವಿಗಳು<br /> ಇಷ್ಟು ಆರಾಮದ ಸಂಕೇತಗಳನ್ನು ಎಂದೂ ಬಳಸುತ್ತಿರಲಿಲ್ಲ.</p>.<p>ದಿನ ರಾತ್ರಿ ಸಂಕೇತಗೊಳದಲ್ಲಿ ಮುಳುಗೇಳುತ್ತಾ<br /> ಕೀರಂ ತಾವೇ ಸಂಕೇತವಾದದ್ದನ್ನು ಜನ ಗಮನಿಸಿರಲಿಕ್ಕಿಲ್ಲ:<br /> ಅವರು ಸಂಕೇತವಾದದ್ದು-<br /> ಓದಿನ ಸೀಮೋಲ್ಲಂಘನಕ್ಕೆ, ಅದ್ಭುತ ಅಂತರ್ಪಠ್ಯೀಯತೆಗೆ,<br /> ಕಾವ್ಯಸಂಭ್ರಮಕ್ಕೆ, ಹೆಣ್ತನದ ಮಡಿಲಿಗೆ,<br /> ಕೊಡುವುದಕ್ಕೆ, ಹಂಚುವುದಕ್ಕೆ,<br /> ಪೂರ್ವಪಶ್ಚಿಮಗಳನ್ನು ಬೆಸೆದು ಪಡೆದ ಪಾಂಡಿತ್ಯಕ್ಕೆ,<br /> ಸ್ವಾರ್ಥವಿಲ್ಲದ ಸಾಹಿತ್ಯಜಗಳಕ್ಕೆ.</p>.<p>ಇಷ್ಟೆಲ್ಲ ಆಡುತ್ತ ಆಡುತ್ತ ಕೀರಂ ಕಾಯುತ್ತಲೇ ಇರುತ್ತಾರೆ<br /> ನಾಗಲಿಂಗಯೋಗಿಯ ಹಾಗೆ ತಿರುಗುತ್ತಲೇ ಇರುತ್ತಾರೆ<br /> ಪ್ರತಿಮೆ ರೂಪಕ ಸಂಕೇತಗಳ ಸಂಗದಲ್ಲಿ ಮಾತ್ರವೇ<br /> ಮೂಡುವ ಆ ದಿವ್ಯ ಅರಿವಿಗಾಗಿ...</p>.<p>ಹೀಗೆ ಸದಾ ಅರಿವಿನ ಇರುವಲ್ಲಿರುವ ಕೀರಂ<br /> ಇನ್ನಿಲ್ಲವೆಂದು ತಿಳಿದವರು<br /> ಕಾವ್ಯದ ಕಣ್ಣು ಕಳಕೊಂಡು ಮುಕ್ಕಾಗುತ್ತಾರೆ:</p>.<p>ಕಾವ್ಯಮಂಡಲ ಬಿಟ್ಟು ಕೀರಂ ಇನ್ನೆಲ್ಲಿ ಹೋಗುತ್ತಾರೆ?<br /> ಇಲ್ಲೇ ಎಲ್ಲೋ ಕನ್ನಡ ಕಾವ್ಯಮಂಡಲದಲ್ಲಿ<br /> ಎಡೆಬಿಡದೆ ತಿರುಗುತ್ತಲೇ ಇರುತ್ತಾರೆ;<br /> ನಮ್ಮ ಆತ್ಮಗಳನ್ನು ಗರಗರ ತಿರುಗಿಸುತ್ತಲೇ ಇರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>