<p><strong>ಬೆಂಗಳೂರು</strong>: `ಸಾಹಿತ್ಯ ಸೇವೆ ಹಾಗೂ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದ ನಡುವೆಯೂ ಆಳವಾದ ಶಾಂತಿಯನ್ನು ಕಾಯ್ದುಕೊಳ್ಳಲು ಚಿ.ಶ್ರೀನಿವಾಸರಾಜು ಅವರಿಗೆ ಸಾಧ್ಯವಾಗಿತ್ತು. ಎಲ್ಲರೂ ಅನುಸರಿಸಬೇಕಾದ ನಡೆಯಿದು' ಎಂದು ನಾಟಕಕಾರ ಕೆ.ವಿ.ನಾರಾಯಣ ಶ್ಲಾಘಿಸಿದರು.<br /> <br /> ಸಂಸ ರಂಗಪತ್ರಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಂಗ ಪತ್ರಿಕೆಯ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಚಿ.ಶ್ರೀನಿವಾಸರಾಜು ನೆನಪಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಾಹಿತ್ಯಾಭಿರುಚಿಯನ್ನು ಯುವ ಜನತೆಯಲ್ಲಿ ಬಿತ್ತುವುದನ್ನು ಕರ್ತವ್ಯ ವೆಂದು ಭಾವಿಸಿದರೆ ಹೊರತು ಅದು ಅವರಿಗೆ ಎಂದೂ ಅಹಂನ ವಿಷಯವಾಗಿರಲಿಲ್ಲ.</p>.<p>ಬದುಕಿನುದ್ದಕ್ಕೂ ಮಾನವೀಯತೆಯ ಮಂತ್ರವನ್ನು ಜಪಿಸಿ, ಹಲವರಿಗೆ ಪ್ರೇರಣೆಯಾದ ಮಹಾನ್ ವ್ಯಕ್ತಿ' ಎಂದು ಬಣ್ಣಿಸಿದರು.<br /> `ರಾಜಕೀಯ, ಸಾಮಾಜಿಕ ಎಲ್ಲ ವಿಚಾರಗಳ ಬಗ್ಗೆಯೂ ಸ್ವತಂತ್ರ ನಿಲುವು ಹೊಂದಿದ್ದ ಅವರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ , ಅವೆಲ್ಲವೂ ನಡೆಯಲ್ಲಿ ಜಾರಿಯಾಗುತ್ತಿದ್ದವು' ಎಂದು ತಿಳಿಸಿದರು.<br /> <br /> ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ, `ಎಲ್ಲರಿಗೂ ಅಣ್ಣನಂತೆ ಮಾರ್ಗದರ್ಶನ ಮಾಡಿ, ಸದ್ದು ಮಾಡದೇ ಸಂತನಂತೆ ಬದುಕಿದರು' ಎಂದರು. ಚಿ.ಶ್ರೀನಿವಾಸರಾಜು ಕುರಿತ `ಅಂತರ್ಜಲ' ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಸಾಹಿತ್ಯ ಸೇವೆ ಹಾಗೂ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದ ನಡುವೆಯೂ ಆಳವಾದ ಶಾಂತಿಯನ್ನು ಕಾಯ್ದುಕೊಳ್ಳಲು ಚಿ.ಶ್ರೀನಿವಾಸರಾಜು ಅವರಿಗೆ ಸಾಧ್ಯವಾಗಿತ್ತು. ಎಲ್ಲರೂ ಅನುಸರಿಸಬೇಕಾದ ನಡೆಯಿದು' ಎಂದು ನಾಟಕಕಾರ ಕೆ.ವಿ.ನಾರಾಯಣ ಶ್ಲಾಘಿಸಿದರು.<br /> <br /> ಸಂಸ ರಂಗಪತ್ರಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಂಗ ಪತ್ರಿಕೆಯ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಚಿ.ಶ್ರೀನಿವಾಸರಾಜು ನೆನಪಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಾಹಿತ್ಯಾಭಿರುಚಿಯನ್ನು ಯುವ ಜನತೆಯಲ್ಲಿ ಬಿತ್ತುವುದನ್ನು ಕರ್ತವ್ಯ ವೆಂದು ಭಾವಿಸಿದರೆ ಹೊರತು ಅದು ಅವರಿಗೆ ಎಂದೂ ಅಹಂನ ವಿಷಯವಾಗಿರಲಿಲ್ಲ.</p>.<p>ಬದುಕಿನುದ್ದಕ್ಕೂ ಮಾನವೀಯತೆಯ ಮಂತ್ರವನ್ನು ಜಪಿಸಿ, ಹಲವರಿಗೆ ಪ್ರೇರಣೆಯಾದ ಮಹಾನ್ ವ್ಯಕ್ತಿ' ಎಂದು ಬಣ್ಣಿಸಿದರು.<br /> `ರಾಜಕೀಯ, ಸಾಮಾಜಿಕ ಎಲ್ಲ ವಿಚಾರಗಳ ಬಗ್ಗೆಯೂ ಸ್ವತಂತ್ರ ನಿಲುವು ಹೊಂದಿದ್ದ ಅವರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ , ಅವೆಲ್ಲವೂ ನಡೆಯಲ್ಲಿ ಜಾರಿಯಾಗುತ್ತಿದ್ದವು' ಎಂದು ತಿಳಿಸಿದರು.<br /> <br /> ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ, `ಎಲ್ಲರಿಗೂ ಅಣ್ಣನಂತೆ ಮಾರ್ಗದರ್ಶನ ಮಾಡಿ, ಸದ್ದು ಮಾಡದೇ ಸಂತನಂತೆ ಬದುಕಿದರು' ಎಂದರು. ಚಿ.ಶ್ರೀನಿವಾಸರಾಜು ಕುರಿತ `ಅಂತರ್ಜಲ' ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>