ಬಂದಿದೆ ಗ್ರಾಮ ಪಂಚಾಯಿತಿ ಚುನಾವಣೆ. ಹಳ್ಳಿಕಟ್ಟೆ, ಬಸ್ ನಿಲ್ದಾಣ, ಕ್ಷೌರಿಕದಂಗಡಿ, ಹೊಲ, ಮನೆ, ಬೀದಿಬೀದಿಗಳಲ್ಲೂ ಈಗ ಚುನಾವಣೆಯದ್ದೇ ಮಾತಿನ ಭರಾಟೆ.
ಅಂದು ಅಭ್ಯರ್ಥಿಗಳು ತೆಗೆದುಕೊಳ್ಳುತ್ತಿದ್ದರು ಮತದಾರರಿಂದ ಆಣೆ ಪ್ರಮಾಣ. ಇಂದು ಅದಕ್ಕೆಲ್ಲ ಬೆಲೆಯಿಲ್ಲ. ಈಗೇನಿದ್ದರೂ ಹಣ, ಮದ್ಯ, ಮಾಂಸ ಹಂಚು ವುದರಿಂದಲೇ ಓಲೈಕೆ. ಗೆದ್ದವರು ಊರಿಗೆ ಅರಸರು, ಸೋತವರಿಗೆ ವಿರಸ. ಗೆದ್ದವರಿಗೆ ಐದು ವರ್ಷ ಪೂರ್ತಿ ಅಧಿಕಾರದ ಅಮಲು, ಸೋತವರಿಗೆ ಸೋಲಿನ ಹಿಂದಿನ ಲೆಕ್ಕಾಚಾರದ ಅಳಲು.