ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.12ರಿಂದ ಶರಣ ಸಾಹಿತ್ಯ ಸಮ್ಮೇಳನ­

Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿ.­12ರಿಂದ 3 ದಿನ­ಗಳ ಕಾಲ ಅಖಿಲ ಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನ­ವನ್ನು  ವಿಜಯ­­ಪುರದಲ್ಲಿ ಹಮ್ಮಿಕೊಳ್ಳ­ಲಾ­ಗಿದೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ತಿಳಿಸಿದರು.

ಶನಿವಾರ ಇಲ್ಲಿ ಪತ್ರಿಕಾ­­ಗೋಷ್ಠಿ­ಯಲ್ಲಿ ಮಾತನಾಡಿದ ಅವರು, ‘ ಹಿರಿಯ ವಿದ್ವಾಂಸ ಮತ್ತು ಗ್ರಂಥಾ­ಲಯದ ತಜ್ಞ ಡಾ.ಎಸ್.ಆರ್.­ಗುಂಜಾಳ ಅವರು 12ನೇ ಸಾಹಿತ್ಯ ಸಮ್ಮೇ­ಳನದ ಅಧ್ಯಕ್ಷರಾಗಿ ಆಯ್ಕೆ­ಯಾಗಿ­ದ್ದಾರೆ’ ಎಂದರು.

‘ಸಮ್ಮೇಳನದ ಅಂಗವಾಗಿ ಚಿಂತನ­ಗೋಷ್ಠಿಗಳು, ಪುಸ್ತಕ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

‘ಕರ್ನಾಟಕ ಸೇರಿದಂತೆ ಆಂಧ್ರ­ಪ್ರದೇಶ, ಮಹಾರಾಷ್ಟ್ರ, ತಮಿಳು­ನಾಡು, ಗೋವಾ ಮತ್ತಿತರ ರಾಜ್ಯ­ಗಳಿಂದ ಶರಣ ಸಾಹಿತ್ಯ   ಆಸಕ್ತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT