ಶನಿವಾರ ಬೆಳಿಗ್ಗೆ ‘ಎಂಡಿಎಂಕೆ’ ನಾಯಕ ವೈಕೊ ನೇತೃತ್ವದಲ್ಲಿ ತಂಜಾವೂರಿನ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ರೈತರು ಕರ್ನಾಟಕದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರಿ ಮಳೆಯಿಂದಾಗಿ ಹಳಿಗಳ ಮೇಲೆ ನೀರು ಹರಿಯುತ್ತಿದ್ದರೂ ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
‘ಅಣೆಕಟ್ಟು ನಿರ್ಮಾಣಕ್ಕೆ ತಡೆ ನೀಡುವುದರಿಂದ ಸುಮಾರು ಐದು ಕೋಟಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬಹುದು’ ಎಂದು ಪ್ರತಿಭಟನೆ ಬಳಿಕ ವೈಕೊ ಸುದ್ದಿಗಾರರಿಗೆ ತಿಳಿಸಿದರು.