ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಳದಲ್ಲೇಕೆ ಬೇಕು?

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಾಹಿತಿಗಳಲ್ಲಿ ಎಲ್ಲ ಧರ್ಮದವರೂ ಇರುವುದರಿಂದ ಸಾಹಿತ್ಯ ಸಮ್ಮೇಳನಗಳು ಧರ್ಮ ನಿರಪೇಕ್ಷವಾಗಿರಬೇಕಾದುದು ಅವಶ್ಯ.  ಆದರೆ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ವೈದಿಕ ದೇವಸ್ಥಾನಗಳ ಆವರಣದಲ್ಲಿಯೇ ಜರುಗುತ್ತಿದೆ. ಇದಕ್ಕೆ ಹಲವು ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಈ ವರ್ಷವೂ ಈ ತಿಂಗಳ ಕೊನೆಗೆ ಮತ್ತೆ ಕಟೀಲು ದೇವಳದೊಳಗೇ  20ನೇ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಇದನ್ನು ತಪ್ಪಿಸಲಾಗದೆ?

ಮೇಲಾಗಿ ಋತುಮತಿಯಾದ ಮಹಿಳಾ ಸಾಹಿತಿಗಳು, ಜನನ/ ಮರಣದ ಸೂತಕವಿರುವ ಕೆಲವು ಸಾಹಿತಿಗಳು ದೇವಸ್ಥಾನದ ಒಳಹೋಗಲು ಮುಜುಗರಪಡುತ್ತಾರೆ. ಹಾಗಾಗಿ ಸಾಹಿತ್ಯ ಸಮ್ಮೇಳನವನ್ನು ಯಾವುದೇ ಧರ್ಮದ ಪವಿತ್ರ ಸ್ಥಳ ಹೊರತುಪಡಿಸಿ ಆಯೋಜಿಸುವುದೇ ಉಚಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT