ಬೆಂಗಳೂರು: ಎರಡು ದಿನಗಳ ಕಾಲ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳಲ್ಲಿ ತರಬೇತಿ ನಿರತ ಚಾಲಕರ ಸಹಾಯದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಈಗಾಗಲೇ ಶಾಂತಿನಗರ ನಿಲ್ದಾಣದಿಂದ 5 ಬಸ್ಗಳು ಕೆಂಪೇಗೌಡ ಬಸ್ ನಿಲ್ದಾಣದತ್ತ ಸಂಚಾರ ನಡೆಸಿವೆ.
ಮಂಡ್ಯದಲ್ಲಿ ಕೆಎಸ್ಆರ್ ಟಿ ಬಸ್ ಸಂಚಾರ: ಮದ್ದೂರು ಮಂಡ್ಯ ರೂಟ್ನಲ್ಲಿ ಕೆಎಸ್ಆರ್ ಟಿ ಬಸ್ ಗಳು ಸಂಚಾರ ಆರಂಭಿಸಿವೆ, ಈಗಾಗಲೇ ಸಾರಿಗೆ ನೌಕರರು ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಸಂಚಾರ ಆರಂಭಿಸಿರುವ ಬಸ್ ಗಳಿಗೆ ಪೊಲೀಸರ ಭದ್ರತೆ ಒದಗಿಸಿದ್ದಾರೆ,