ಬೆಂಗಳೂರು: ‘ನೃತ್ಯ, ಸಂಗೀತ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರನ್ನು ಗುರುತಿಸಿ ಜುಲೈ 31ರಂದು ನಗರದ ಎಡಿಎ ರಂಗಮಂದಿರದಲ್ಲಿ ನಾಟ್ಯಶ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅಜಿತ್ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಪೋಷಕ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.|
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಥಕ್ ಕಲಾವಿದೆ ಡಾ. ಮಾಯಾರಾವ್ (ನೃತ್ಯ) ವಿದ್ವಾಂಸ ಎಚ್.ಕೆ. ವೆಂಕಟರಾಮ್ (ಸಂಗೀತ) ಹಾಗೂ ನಟ ಸಿ.ಎಚ್. ಲೋಕನಾಥ್ (ರಂಗಭೂಮಿ) ಅವರಿಗೆ 2014ನೇ ಸಾಲಿನ ‘ನಾಟ್ಯಶ್ರೀ ಪ್ರಶಸ್ತಿಯ ಜೊತೆಗೆ ಬೆಳ್ಳಿಪದಕ, ನೆನಪಿನ ಕಾಣಿಕೆ ಹಾಗೂ ₨ 15 ಸಾವಿರ ನಗದು ನೀಡಿ ಗೌರವಿಸಲಾಗುತ್ತದೆ’ ಎಂದು ತಿಳಿಸಿದರು.