ಮೈಸೂರು: ಕರ್ನಾಟಕ ಕ್ರೀಡಾ ಪ್ರತಿಷ್ಠಾನವು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಸಹಯೋಗದಲ್ಲಿ ಜೂನ್ 4ರಿಂದ 7ರವರೆಗೆ ನಗರದಲ್ಲಿ ರಾಜ್ಯ ರ್್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಆಯೋಜಿಸಿದೆ.
‘ನಗರದ ನಜರಬಾದ್ನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ 400ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾ ಯಿಸಿಕೊಂಡಿದ್ದಾರೆ. ವಯೋಮಿತಿ ಅನುಸಾರ ಎಂಟು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದು ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಉಪಾಧ್ಯಕ್ಷ ಮಂಜುನಾಥ್ ಅರಸ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘7ರಂದು ಫೈನಲ್ ನಡೆಯಲಿದೆ. ಅತಿಹೆಚ್ಚು ಪಾಯಿಂಟ್ ಪಡೆದವರಿಗೆ ‘ಬೆಸ್ಟ್ ಕ್ಲಬ್ ಟ್ರೋಫಿ–2015’ ನೀಡ ಲಾಗುವುದು. ನಾಕ್ಔಟ್ ಹಂತದಿಂದ ನಗದು ಬಹುಮಾನವಿದೆ’ ಎಂದು ಹೇಳಿದರು.