ಸಿಗರೇಟುಗಳನ್ನು ಬಿಡಿಯಾಗಿ ಮಾರಾಟ ಮಾಡುವುದಕ್ಕೆ ಹಾಗೂ ತಂಬಾಕು ಉತ್ಪನ್ನಗಳ ಖರೀದಿಗೆ ಕನಿಷ್ಠ ವಯೋಮಿತಿ ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಸಾಧ್ಯವೇ ಎನ್ನುವುದೇ ಪ್ರಶ್ನೆ.
ನಾಯಿಕೊಡೆಗಳಂತೆ ಎಲ್ಲೆಡೆ ಇರುವ ಪಾನ್ಬೀಡಾ ಅಂಗಡಿಗಳಿಗೆ ಕಣ್ಗಾವಲು ಇಡುವವರು ಯಾರು? ಗೂಡು ಅಂಗಡಿಗಳಿಗೆ ಕಾವಲು ಕಾಯುವವರಾರು? ರಾಜ್ಯದಲ್ಲಿ ಗುಟ್ಕಾ ನಿಷೇಧವಿದ್ದರೂ ಕಂಪೆನಿಗಳು ತಂಬಾಕು ಮತ್ತು ಅಡಿಕೆಯನ್ನು ಪ್ರತ್ಯೇಕ ಪೊಟ್ಟಣಗಳಲ್ಲಿ ಪೂರೈಸುತ್ತಿಲ್ಲವೆ? ಸರ್ಕಾರವು ಜನರ ಆರೋಗ್ಯದ ಕುರಿತು ನೈಜ ಕಾಳಜಿ ಹೊಂದಿದ್ದರೆ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.