ನೆಲಮಂಗಲ: ಶಿವಗಂಗೆ ಶೃಂಗೇರಿ ಶಾರದಾ ಮಠದ ಪಟ್ಟಾಭಿಷೇಕ ಮಹೋತ್ಸವವು ಗುರುವಾರ ಬೆಳಗ್ಗೆ 10.45ಕ್ಕೆ ಹೋಮ ಹವನಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಮಠಕ್ಕೆ ಪುರುಷೋತ್ತಮ ಭಾರತಿ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ ನೇಮಿಸಿದರು. ಪುರುಷೋತ್ತಮ ಭಾರತಿ ಸ್ವಾಮಿಜಿ ಪಟ್ಟಾಧಿಕಾರ ಮಹೋತ್ಸವ ವಿಧಿ ವಿಧಾನಗಳು ಬುಧವಾರದಿಂದಲೇ ಪ್ರಾರಂಭವಾಗಿದ್ದವು.