ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಅನನುಕೂಲ ತಪ್ಪಿಸಿ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೊನ್ನೆ (ಏ. 18) ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಿಂಧನೂರಿನಿಂದ ಶಿರಾಗೆ ಪ್ರಯಾಣ ಮಾಡುತ್ತಿದ್ದೆ. ಬಸ್ಸು ರಾಂಪುರ ಸಮೀಪ ಬಂದಾಗ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿತು. ನಿರ್ವಾಹಕರು ಮತ್ತೊಂದು ಬಸ್ಸಿನಲ್ಲಿ ಕಳುಹಿಸುವುದಾಗಿ ತಿಳಿಸಿದರು. 20 ನಿಮಿಷಗಳ ನಂತರ ಬಂದ ಬಸ್ಸಿನ ನಿರ್ವಾಹಕ 5 ಜನರನ್ನು ಮಾತ್ರ ಹತ್ತಿಸಿಕೊಳ್ಳಲು ಸಾಧ್ಯ ಎಂದು ಹೇಳಿ ಸೀಟು ಖಾಲಿ ಇದ್ದರೂ 5 ಜನರನ್ನು ಮಾತ್ರ ಹತ್ತಿಸಿಕೊಂಡು ಹೊರಟೇಬಿಟ್ಟ. ಮತ್ತೆ 30 ನಿಮಿಷಗಳ ನಂತರ ಬಂದ ಬಸ್ಸಿನ ನಿರ್ವಾಹಕ ಕೂಡಾ 5 ಜನರನ್ನು ಮಾತ್ರ ಹತ್ತಿಸಿಕೊಳ್ಳು­ವುದಾಗಿ ತಿಳಿಸಿ ಹೊರಡುವುದರಲ್ಲಿದ್ದ, ನಾವು ಬಿಡದೇ ವಾಗ್ವಾದ ನಡೆಸಿ ಬಸ್ಸು ಏರಿದೆವು.

ಹೀಗೆ ಪ್ರತೀ ಬಸ್ಸಿನವರೂ 5 ಮಂದಿಯನ್ನು ಮಾತ್ರ ಹತ್ತಿಸಿಕೊಂಡು ಹೋದರೆ ಉಳಿದ ಉಳಿದ ಪ್ರಯಾಣಿಕರ ಗತಿ ಏನು? ಮತ್ತೆ ಒಂದೂ ಬಸ್ಸು ಬರದಿದ್ದರೆ ಅವರೆಲ್ಲಾ ಹೇಗೆ ತೆರಳುವುದು? ಅದರಲ್ಲಿದ್ದ ಮಹಿಳೆಯರ ಹಾಗೂ ವಯೋವೃದ್ಧರ ಪಾಡೇನು?

ಸಾರಿಗೆ ನಿಗಮದ  ಮಾನ್ಯ ನಿರ್ದೇಶಕರೇ, ಈ ರೀತಿ ಅನನುಕೂಲ ಉಂಟಾದ ಬಸ್ಸಿನ 5 ಮಂದಿಯನ್ನು ಮಾತ್ರ ಹತ್ತಿಸಿಕೊಂಡು ಹೋಗ­ಬೇಕೆಂಬ ನಿಯಮವಿದೆಯೇ? ಇದ್ದರೆ ಈ ಕೂಡಲೇ ಆ ನಿಯಮವನ್ನು ಪರಿಷ್ಕರಿಸಿ. ಇಂತಹ ನಿಯಮ ಇಲ್ಲದಿದ್ದರೆ; ಆಕಸ್ಮಿಕವಾಗಿ      ಒದಗುವ ತೊಂದರೆ ಸಮಯದಲ್ಲಿ ಪ್ರಯಾಣಿಕ ಸ್ನೇಹಿಯಾಗಿ ವರ್ತಿಸುವಂತೆ  ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT