ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‍ಬುಕ್‍ನಲ್ಲಿ ಅರ್ನಬ್ ಗೋಸ್ವಾಮಿ ವಿರುದ್ದ ಗುಡುಗಿದ ಬರ್ಖಾ ದತ್

Last Updated 27 ಜುಲೈ 2016, 12:37 IST
ಅಕ್ಷರ ಗಾತ್ರ

ನವದೆಹಲಿ: ಹುಸಿ ಜಾತ್ಯಾತೀತ ಮತ್ತು ಪಾಕಿಸ್ತಾನ ಪರವಾಗಿರುವ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಟೈಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಒತ್ತಾಯಿಸಿದ್ದು, ಅರ್ನಬ್‍ರ ಈ ಹೇಳಿಕೆ ವಿರುದ್ಧ ಎನ್‍ಡಿಟಿವಿ ಕನ್ಸಲ್ಟಿಂಗ್ ಎಡಿಟರ್ ಬರ್ಖಾ ದತ್ ಕಿಡಿ ಕಾರಿದ್ದಾರೆ.

ಅರ್ನಬ್ ಗೋಸ್ವಾಮಿ ಅವರ ಹೇಡಿತನದ ಬೂಟಾಟಿಕೆಯ ವಿರುದ್ಧ ಗುಡುಗಿ ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಬರ್ಖಾ ದತ್, ಮಾಧ್ಯಮರಂಗದಲ್ಲಿದ್ದುಕೊಂಡೇ ಈ ರೀತಿ ಮಾತನಾಡುವುದಕ್ಕೆ ಆತನಿಗೆ ನಾಚಿಕೆಯಾಗಬೇಕು ಎಂದು ಬರೆದಿದ್ದಾರೆ.

ಕಾರ್ಗಿಲ್ ದಿವಸ್ ಪ್ರಯುಕ್ತ ಜುಲೈ 26 ರಂದು ನಡೆದ ನ್ಯೂಸ್ ಅವರ್ ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ ತಮ್ಮ ಪ್ರತಿಸ್ಪರ್ಧಿ ವಾಹಿನಿಗಳ ಪತ್ರಕರ್ತರ ವಿರುದ್ಧ ಕಿಡಿ ಕಾರಿದ್ದರು.  #ProPakistanDoves (ಪಾಕಿಸ್ತಾನ ಪರ ಪಾರಿವಾಳಗಳು) ಎಂದು ಪ್ರತಿಸ್ಪರ್ಧಿ ವಾಹಿನಿಯ ಪತ್ರಕರ್ತರನ್ನು ಟೀಕಿಸಿದ ಅರ್ನಬ್‍ ವಿರುದ್ಧ ಸಿಡಿಮಿಡಿಗೊಂಡಿರುವ ಬರ್ಖಾ ದತ್ ಇದೀಗ ತಮ್ಮ ಫೇಸ್‍ಬುಕ್ ಪೋಸ್ಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಬಿಜೆಪಿ ಮತ್ತು ಪಿಡಿಪಿ, ಪಾಕಿಸ್ತಾನ ಮತ್ತು ಹುರಿಯತ್ ಜತೆ ಮಾತುಕತೆ ನಡೆಸಿದಾಗ ಅರ್ನಬ್ ಸುಮ್ಮನಿದ್ದದ್ದು ಯಾಕೆ? ಸರ್ಕಾರದ ಬಗ್ಗೆ ಮೌನ ತಳೆದಿದ್ದು ಯಾಕೆ? ಅದು ಚಮ್ಚಾಗಿರಿ ಆಗಿತ್ತೆ? ಎಂದು ಬರ್ಖಾ ಪ್ರಶ್ನಿಸಿದ್ದಾರೆ.
 

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT