ಕಾರ್ಗಿಲ್ ದಿವಸ್ ಪ್ರಯುಕ್ತ ಜುಲೈ 26 ರಂದು ನಡೆದ ನ್ಯೂಸ್ ಅವರ್ ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ ತಮ್ಮ ಪ್ರತಿಸ್ಪರ್ಧಿ ವಾಹಿನಿಗಳ ಪತ್ರಕರ್ತರ ವಿರುದ್ಧ ಕಿಡಿ ಕಾರಿದ್ದರು. #ProPakistanDoves (ಪಾಕಿಸ್ತಾನ ಪರ ಪಾರಿವಾಳಗಳು) ಎಂದು ಪ್ರತಿಸ್ಪರ್ಧಿ ವಾಹಿನಿಯ ಪತ್ರಕರ್ತರನ್ನು ಟೀಕಿಸಿದ ಅರ್ನಬ್ ವಿರುದ್ಧ ಸಿಡಿಮಿಡಿಗೊಂಡಿರುವ ಬರ್ಖಾ ದತ್ ಇದೀಗ ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿ ಮತ್ತು ಪಿಡಿಪಿ, ಪಾಕಿಸ್ತಾನ ಮತ್ತು ಹುರಿಯತ್ ಜತೆ ಮಾತುಕತೆ ನಡೆಸಿದಾಗ ಅರ್ನಬ್ ಸುಮ್ಮನಿದ್ದದ್ದು ಯಾಕೆ? ಸರ್ಕಾರದ ಬಗ್ಗೆ ಮೌನ ತಳೆದಿದ್ದು ಯಾಕೆ? ಅದು ಚಮ್ಚಾಗಿರಿ ಆಗಿತ್ತೆ? ಎಂದು ಬರ್ಖಾ ಪ್ರಶ್ನಿಸಿದ್ದಾರೆ.