ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆಗೆ ರಾಷ್ಟ್ರೀಯ ಧರ್ಮಗ್ರಂಥ ಸ್ಥಾನ

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿಕೆ
Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಭಗವ­ದ್ಗೀತೆಗೆ ಪವಿತ್ರ ರಾಷ್ಟ್ರೀಯ ಗ್ರಂಥದ ಸ್ಥಾನ­ಮಾನ ನೀಡಬೇಕು ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ಈ ಮೂಲಕ ಭಗವದ್ಗೀತೆಯನ್ನು ಜಗತ್ತಿನ ನಾಯಕರಿಗೆ ಪರಿಚಯಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಒಲವನ್ನು ಪ್ರಶಂಸಿಸಿದ್ದಾರೆ.
ಭಗವದ್ಗೀತೆಗೆ ರಾಷ್ಟ್ರೀಯ ಧರ್ಮ­ಗ್ರಂಥ ಸ್ಥಾನಮಾನ­ವನ್ನು ಅಧಿಕೃತವಾಗಿ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಸುಷ್ಮಾ ಮುಂದಿಟ್ಟಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯ ಪ್ರತಿಯನ್ನು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ನೀಡಿದ್ದಾರೆ. ಇದರರ್ಥ ಈ ಕೃತಿಗೆ ರಾಷ್ಟ್ರೀಯ ಗೌರವ ಇದೆ ಎಂಬುದೇ ಆಗಿದೆ. ಆದ್ದರಿಂದ ಇದನ್ನು ರಾಷ್ಟ್ರೀಯ ಪವಿತ್ರ­ಗ್ರಂಥ ಎಂದು ಅಧಿಕೃತವಾಗಿ ಘೋಷಿಸ­ಬೇಕಿದೆ’ ಎಂದು    ನವ­ದೆಹಲಿಯ  ಕೆಂಪು­ಕೋಟೆಯಲ್ಲಿ ಭಾನುವಾರ ನಡೆದ ಭಗವ­ದ್ಗೀತೆಯ 5,151ನೇ ಸ್ಮರಣೆ  ಸಾರ್ವಜನಿಕ ಕಾರ್ಯ­ಕ್ರಮದಲ್ಲಿ ತಿಳಿಸಿದರು.

‘ವಿದೇಶಾಂಗ ವ್ಯವಹಾರಗಳ ಇಲಾಖೆ­ಯಲ್ಲಿ ವಿಶ್ವದ ಹಲವಾರು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುತ್ತೇನೆ. ಇವುಗಳಿಗೆಲ್ಲ ಪರಿಹಾರ ನೀಡಲು ಗೀತೆಯ ತತ್ವಗಳು ಪ್ರೇರಣೆಯಾಗಿವೆ. ಗೀತೆ­ಯನ್ನು ಬೋಧಿಸಿದ ಕೃಷ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ’  ಎಂದು ಹೇಳಿದರು.

ನಮ್ಮದು ಜಾತ್ಯತೀತ ರಾಷ್ಟ್ರ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿರುವು­ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ­ಯಲ್ಲಿ ಸಂವಿಧಾನವೇ ಪವಿತ್ರ ಗ್ರಂಥ
-ಮಮತಾ ಬ್ಯಾನರ್ಜಿ 
ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT