ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರವೀಣ್ ನಿರ್ದೇಶನದ ಹೊಸ ಸಿನಿಮಾ ‘ಗುಂಟೂರ್ ಟಾಕೀಸ್’ನಲ್ಲಿ ಬಾಲಿವುಡ್್ ನಟ ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕೊನೆಗೂ ನಾನು ಕಮರ್ಷಿಯಲ್ ಚಿತ್ರವೊಂದನ್ನು ಮಾಡುತ್ತಿದ್ದೇನೆ. ಗುಂಟೂರು ಸ್ಲಂಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರಕತೆ ಹೆಣೆದಿದ್ದೇನೆ. ಈ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ನಟ ಮಹೇಶ್ ಮಂಜ್ರೇಕರ್ ನಟಿಸುತ್ತಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ’ ಎಂದಿದ್ದಾರೆ ಪ್ರವೀಣ್.
‘ಗುಂಟೂರ್ ಟಾಕೀಸ್’ ಚಿತ್ರದಲ್ಲಿ ಸಿದ್ದು ಹಾಗೂ ಮಧು ಶಾಲಿನಿ ನಾಯಕ ನಾಯಕಿಯರು. ನಟಿ ಶ್ರದ್ಧಾ ದಾಸ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಮಹೇಶ್ ಮಂಜ್ರೇಕರ್ ಈ ಹಿಂದೆ ‘ಅದುರ್್ಸ’, ‘ಹೋಮಂ’, ‘ಒಕ್ಕಡುನ್ನಾಡು’ ಮೊದಲಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.
‘ಚಂದಮಾಮಾ ಕಥಾಲು’ ಚಿತ್ರಕ್ಕಾಗಿ ಪ್ರವೀಣ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು.