ನವದೆಹಲಿ: ರೈಲ್ವೆ ಸಚಿವ ಸದಾನಂದ ಗೌಡ ಅವರು ರಾಜ್ಯಕ್ಕೆ ಹತ್ತು ಹೊಸ ರೈಲು ಮಾರ್ಗ ಸಮೀಕ್ಷೆಗೆ ಆದ್ಯತೆ ನೀಡಿದ್ದಾರೆ.
ಇದರಲ್ಲಿ ಬೆಂಗಳೂರು–ಚೆನ್ನರಾಯಪಟ್ಟಣ, ಶಿವಮೊಗ್ಗ–ಶೃಂಗೇರಿ –ಮಂಗಳೂರು, ಮೈಸೂರು ಮತ್ತು ಕುಶಾಲನಗರ, ಗಬ್ಬೂರು –ಬಳ್ಳಾರಿ, ಮಂಗಳೂರು –ಉಲ್ಲಾಳ–ಸುರತ್ಕಲ್(ಹೊಸ ಜೋಡಿ ಮಾರ್ಗ) ಹೊಸ ಮಾರ್ಗ ಸೇರಿದಂತೆ ಹತ್ತು ಹೊಸ ಮಾರ್ಗಗಳ ಸಮೀಕ್ಷೆಗೆ ಅನುದಾನ ಘೋಷಿಸಿದ್ದಾರೆ.