ಪೀಣ್ಯ ದಾಸರಹಳ್ಳಿ: ಹೆಗ್ಗನಹಳ್ಳಿ ಬಸ್ಸು ನಿಲ್ದಾಣದ ಹಿಂಭಾಗ ಇರುವ ಮೈದಾನದಲ್ಲಿ ವಿಶ್ವಚೇತನ ಬುದ್ಧ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ 5ನೇ ವರ್ಷದ ರಾಜ್ಯ ಮಟ್ಟದ ಗ್ರಾಮೀಣ ಉತ್ಸವ ಸ್ಪರ್ಧೆಯನ್ನು ಡಿಸೆಂಬರ್ 20 ಮತ್ತು 21ರಂದು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಗೆದ್ದವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪೀಣ್ಯ 2ನೇ ಹಂತ, ಮಾರುತಿ ನಗರ, ಫ್ರೆಂಡ್ಸ್ ಕಾಲೋನಿ, ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ಜನಪದ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಆಂಜನಪ್ಪ ತಿಳಿಸಿದರು.