ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, 2008ರ ಮುಂಬೈ ದಾಳಿಯ ಇನ್ನಷ್ಟು ವಿವರಗಳನ್ನು ಹೊರಹಾಕಿದ್ದಾನೆ. 26/11 ದಾಳಿಯ ಸಂದರ್ಭದಲ್ಲಿ ಲಷ್ಕರ್ ಮತ್ತು ಐಎಸ್ಐ ಸಂಘಟನೆ ಮುಂಬೈ ವಿಮಾನ ನಿಲ್ದಾಣ ಮತ್ತು ನೌಕಾನೆಲೆ ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದವು ಎಂದು ಹೆಡ್ಲಿ ಹೇಳಿದ್ದಾನೆ.
‘ಭವಿಷ್ಯದಲ್ಲಿ ಶಿವಸೇನೆ ಮುಖಂಡನನ್ನು ಹತ್ಯೆ ಮಾಡುವ ಅಥವಾ ಶಿವಸೇನೆ ಭವನದ ಮೇಲೆ ದಾಳಿ ನಡೆಸುವ ಯೋಜನೆಯನ್ನು ಎಲ್ಇಟಿ ಹೊಂದಿತ್ತು. ಹೀಗಾಗಿ ಶಿವಸೇನೆ ಸದಸ್ಯರ ಜತೆಗೆ ಆತ್ಮೀಯ ಸಂಬಂಧ ಬೆಳೆಸುವ ಹೊಣೆಯನ್ನೂ ನನಗೆ ವಹಿಸಲಾಗಿತ್ತು ಎಂದು ವಿಚಾರಣೆ ವೇಳೆ ಹೆಡ್ಲಿ ಹೇಳಿದ್ದಾರೆ.
ಬಾಬಾ ಆಟೊಮಿಕ್ ರೀಸರ್ಚ್ ಸೆಂಟರ್ನ ವಿಡಿಯೊ ಚಿತ್ರೀಕರಣವನ್ನು ಲಷ್ಕರ್ ಕಮಾಂಡರ್ ಮೇಜರ್ ಇಕ್ಬಾಲ್ ಮತ್ತು ಸಾಜಿದ್ಮಿರ್ ಅವರಿಗೆ ಹಸ್ತಾಂತರಿಸಿದ್ದೆ ಎಂದೂ ಹೆಡ್ಲಿ ಹೇಳಿದ್ದಾನೆ.