ಸತ್ಯವನ್ನು ಸತ್ಯವೆನ್ನುವುದು ತಪ್ಪೇನು? ಮೋದಿಯವರ ಸ್ವಚ್ಛಭಾರತ ಅಭಿಯಾನವನ್ನು ಕಾಂಗ್ರೆಸ್ನ ಶಶಿ ತರೂರ್ ಹೊಗಳಿದ ಕಾರಣ ತನ್ನ ಕಾಂಗ್ರೆಸ್ ವಕ್ತಾರ ಸ್ಥಾನವನ್ನು ಕಳೆದುಕೊಂಡಿದ್ದಾರೆ (ಪ್ರ.ವಾ., ಅ.14).
ಒಳ್ಳೆಯ ವಿಚಾರಗಳು ಯಾವ ಮೂಲೆಗಳಿಂದ ಬಂದರೂ ನಿಸ್ಪೃಹೆಯಿಂದ ಸ್ವೀಕರಿಸುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ನಡವಳಿಕೆಯ ಒಂದು ಅಂಗವಲ್ಲವೇ? ಹಿಂದೆ ಸ್ವತಃ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಾಂಗ್ಲಾ ವಿಮೋಚನಾ ಸಾಹಸ ಕಾರ್ಯಕ್ಕಾಗಿ ಮುಕ್ತ ಕಂಠದಿಂದ ಹೊಗಳಿರಲಿಲ್ಲವೇ?