ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಅಮೃತಹಳ್ಳಿಯ ಗೋವಿಂದಪ್ಪ ಬಡಾವಣೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಶನಿವಾರ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು.
ಬೆಳಗ್ಗೆ 4.30ರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಸೀತಾರಾಮರಿಗೆ ಪಂಚಾ ಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ. ಸುಪ್ರಭಾತಸೇವೆ, ವೇದ ಪಾರಾಯಣ, ಆಂಜನೇಯಸ್ವಾಮಿಯ ನೂತನ ಬೆಳ್ಳಿಕವಚಕ್ಕೆ ಮತ್ತು ಕೇದಾರೇಶ್ವರಸ್ವಾಮಿಯ ನೂತನ ಬೆಳ್ಳಿ ನಾಗಾಭರಣಕ್ಕೆ ಪಂಚಗವ್ಯ ಕಲಶ ಅಭಿಷೇಕ ಮತ್ತು ಕವಚಧಾರಣೆ ಕಾರ್ಯಗಳನ್ನು ನೆರವೇರಿಸಲಾ ಯಿತು.
ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮದೇವಾಲಯದ ಪ್ರಪ್ರಥಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.