ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಡ್ಡಾಯ ಇಲ್ಲ: ಸ್ಮೃತಿ ಇರಾನಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಿಕ್ಷಣವನ್ನು ಕೇಸ­ರೀ­ಕರಣ ಮಾಡಲಾ­ಗುತ್ತಿದೆ ಎಂಬ ಆರೋಪ­ ಅಲ್ಲಗಳೆ­ದಿರುವ ಮಾನವ ಸಂಪ­ನ್ಮೂಲ ಅಭಿ­ವೃದ್ಧಿ ಸಚಿವೆ ಸ್ಮೃತಿ ಇರಾನಿ, ಪಠ್ಯದಲ್ಲಿ ಸಂಸ್ಕೃತ ಕಡ್ಡಾಯ­ಗೊಳಿಸುವ ಬೇಡಿಕೆ­ಯನ್ನೂ ಸ್ಪಷ್ಟ­ವಾಗಿ ತಳ್ಳಿಹಾಕಿ­ದ್ದಾರೆ.

ಸುದ್ದಿಸಂಸ್ಥೆಯಲ್ಲಿ ಭಾನುವಾರ  ನಡೆದ ಸಂವಾದ­ದಲ್ಲಿ ಮಾತನಾಡಿ, ‘ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ­ವಾಡ ಅಥವಾ ಪ್ರತಿನಿಧಿ ಎಂದು ಆರೋಪ ಮಾಡುವ ವ್ಯಕ್ತಿಗಳು ನಾವು ಮಾಡಿ­ರುವ ಒಳ್ಳೆಯ ಕೆಲಸ ಮರೆ­ಮಾಚಲು ಈ ರೀತಿ ದಿಕ್ಕು­ತಪ್ಪಿಸುವ ಹೇಳಿಕೆ ನೀಡುತ್ತಿ­ದ್ದಾರೆ’ ಎಂದು ಆರೋಪಿ­ಸಿದರು.

ಕೇಂದ್ರೀಯ ವಿದ್ಯಾಲಯಗಳ ಪಠ್ಯ­ದಲ್ಲಿ ಜರ್ಮನ್‌ ಭಾಷೆ ಬದಲಿಗೆ ಸಂಸ್ಕೃತವನ್ನು ಅಳವಡಿಸುವ ವಿವಾದಿತ ನಿರ್ಧಾರದ ಬಗ್ಗೆ

ರಾಯಭಾರಿ ನಡವಳಿಕೆಗೆ ಸರ್ಕಾರ ಕೆಂಗಣ್ಣು
500 ಕೇಂದ್ರೀಯ ವಿದ್ಯಾಲಯಗಳಲ್ಲಿ ತೃತೀಯ ಭಾಷೆ­ಯನ್ನಾಗಿ ಜರ್ಮನ್‌ ಬದಲು ಸಂಸ್ಕೃತವನ್ನು ಕಲಿಸಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಭಾರತ­ದಲ್ಲಿರುವ ಜರ್ಮನಿ ರಾಯ­ಭಾರಿ ಮೈಕೆಲ್‌ ಸ್ಟೈನರ್‌ ಅವರು ನಡೆದುಕೊಂಡ ರೀತಿ ವಿವಾದಕ್ಕೆ ಎಡೆಮಾಡಿ­ಕೊಟ್ಟಿದೆ.
ಸರ್ಕಾರದ ಈ ನಿರ್ಧಾರದ ಬಳಿಕ ಮೈಕೆಲ್‌ ಅವರು ಸಂಸ್ಕೃತ ಶಿಕ್ಷಕ ಸಂಘ, ಹಾಗೂ ಖಾಸಗಿ ಶಾಲೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿದ್ದರು. ರಾಯ­ಭಾರಿ­ಯೊಬ್ಬರು ಈ ರೀತಿ ನಡೆದು­ಕೊಂಡಿರುವುದು ಅನಪೇಕ್ಷಿತ ನಡವಳಿಕೆ ಎಂಬ ಆಕ್ಷೇಪ ಕೇಳಿ ಬಂದಿದೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘೨೦೧೧ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಜರ್ಮನ್‌ ಭಾಷೆ ಬೋಧ­ನೆಯು ಸಂವಿಧಾನದ ಉಲ್ಲಂಘ­ನೆ­­­ಯಾಗಿದೆ. ಈ ಒಪ್ಪಂದಕ್ಕೆ ಹೇಗೆ ಸಹಿ ಹಾಕ­ಲಾಯಿತು ಎನ್ನುವುದನ್ನು ತನಿಖೆಗೆ ಒಳಪಡಿಸಲಾಗುತ್ತಿದೆ’ ಎಂದರು.

ಸಂಸ್ಕೃತವನ್ನು ಕಡ್ಡಾಯ ಭಾಷೆಯಾ­ಯನ್ನಾಗಿ ಮಾಡಬೇಕೆನ್ನುವ ಬೇಡಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ಸಂವಿಧಾನದ ೮ನೇ ಅನುಸೂಚಿಯಲ್ಲಿ ಸೇರಿಸಲಾದ ಭಾರ­ತದ  ೨೩ ಭಾಷೆಗಳಲ್ಲಿ ಯಾವುದ­ನ್ನಾದರೂ ಆಯ್ಕೆ ಮಾಡಿಕೊಳ್ಳಬ­ಹುದು’ ಎಂದು ಹೇಳಿದರು.

ಜರ್ಮನ್‌ ಭಾಷೆಯನ್ನು ವಿದೇಶಿ ಭಾಷೆಯನ್ನಾಗಿ ಕಲಿಸುವುದು ಮುಂದು­ವರಿ­ಯುತ್ತದೆ ಎಂದೂ ಅವರು ಪುನರು­ಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT