ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಲ್ಲಿದೆಯೇ ಸಮಸ್ಯೆಗೆ ಪರಿಹಾರ?

ಈ ಜೀವನಾ
ಅಕ್ಷರ ಗಾತ್ರ

ಆತ್ಮಹತ್ಯೆ ಸಾಮಾನ್ಯವಾಗಿ ವರದಿಯಾಗುವಂತೆ ಒಂದು ಘಟನೆಗೆ ಸಂಬಂಧಿಸಿದ್ದಾಗಿರದೆ ಹಲವು ಅಂಶಗಳ ಸಮೀಕರಣದಿಂದಾಗಿರುತ್ತದೆ. ಆತ್ಮಹತ್ಯೆ ಒಂದು ಕಾರಣದಿಂದ ತೆಗೆದುಕೊಳ್ಳುವ ನಿರ್ಧಾರವಲ್ಲ.

35 ವರ್ಷದ ವಿವಾಹಿತೆ ಬೆಂಗಳೂರಿನಲ್ಲಿ ತನ್ನ 2 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ಸಮಸ್ಯೆ, ಪತಿಯ ಜೊತೆ ಸದಾ ಜಗಳ ಮತ್ತು ವಿವಾಹಿತ ಬದುಕಿನ ಕಷ್ಟಗಳನ್ನು ಸಹಿಸಲಾಗದೆ ಹಿಂದೆ ಈ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಕೆಯ ಕುಟುಂಬದವರೊಂದಿಗೆ ನಡೆಸಿದ ಸಂದರ್ಶನಗಳಿಂದ ಆಕೆ ಕುಟುಂಬ ಮತ್ತು ಯಾವುದೇ ಸ್ನೇಹಿತರಿಲ್ಲದೆ ಅಂತರ್ಮುಖಿಯಾಗಿದ್ದಳು. ಆಕೆಯ ಸಹೋದರ ಕೂಡ ಖಿನ್ನತೆಯಿಂದ ಬಳಲುತ್ತಿದ್ದ. ಹೀಗಾಗಿ ಅವರ ಕುಟುಂಬದಲ್ಲಿ ಮಾನಸಿಕ ಸಮಸ್ಯೆ ಇರುವುದು ಸ್ಪಷ್ಟ. 

ಈ ಮೇಲಿನ ಉದಾಹರಣೆಯಿಂದ ಆತ್ಮಹತ್ಯೆಗೆ ಹಲವು ಕಾರಣಗಳು ಅಥವಾ ಅಂಶಗಳು ಇರುವುದು ಎಂದು ತಿಳಿಯುತ್ತದೆ. ಇವುಗಳಲ್ಲಿ ಕೆಲವು ಪರಿಸ್ಥಿತಿಯ ಅಂಶಗಳು, ಹಲವು ಅವರ ವ್ಯಕ್ತಿತ್ವ, ಕುಟುಂಬ, ಸಂಬಂಧ ಮತ್ತು ಹೊರಗಿನ ವಾತಾವರಣದ ಅಂಶಗಳು.
ಆತ್ಮಹತ್ಯೆಗಳು ಹೇಗೆ ವರದಿಯಾಗುತ್ತವೆ ಎಂಬುದಕ್ಕೆ ತದ್ವಿರುದ್ಧವಾಗಿದ್ದು, ಆತ್ಮಹತ್ಯೆಯಲ್ಲಿ ಹಲವು ಸಂಗತಿಗಳು ಅಡಕವಾಗಿರುತ್ತವೆ. ಒಂದು ನಿರ್ದಿಷ್ಟ ಘಟನೆಯಿಂದ ಆತ್ಮಹತ್ಯೆ ಸಂಭವಿಸುವುದಿಲ್ಲ.

ಭಾರತದಲ್ಲಿ ಒಟ್ಟಾರೆ ಆತ್ಮಹತ್ಯೆ ಪ್ರಮಾಣದಲ್ಲಿ ಯುವಕರ(15-29) ಪಾಲು ಅಧಿಕ. ಕೌಟುಂಬಿಕ ಕಲಹ, ಅಸಮಾಧಾನ, ಸಂಬಂಧಗಳ ವೈಫಲ್ಯ, ಹಿಂಸೆ, ಮಾನಸಿಕ ಅನಾರೋಗ್ಯ, ಚಟಗಳು ಮತ್ತು ನಿರಾಸೆಗಳು ಹಲವು ಆತ್ಮಹತ್ಯೆಗಳ ಹಿಂದಿರುವ ಅಂಶಗಳು ಎಂದು ನಿರಂತರ ಸಂಶೋಧನೆಗಳಿಂದ ಬೆಳಕಿಗೆ ಬರುತ್ತಿದೆ.

ಅಧ್ಯಯನಗಳು ಗುರುತಿಸಿರುವ ಇತರ ಹಾನಿಕಾರಕ ಅಂಶಗಳೆಂದರೆ ಕುಟುಂಬದಲ್ಲಿ ಆತ್ಮಹತ್ಯೆ ಇತಿಹಾಸ, ವ್ಯಕ್ತಿಯ ಆತ್ಮಹತ್ಯೆ ಪ್ರಯತ್ನಗಳು, ಡಿಪ್ರೆಷನ್‌ನಂಥ ಮಾನಸಿಕ ಅನಾರೋಗ್ಯ, ಭರವಸೆ ಇಲ್ಲದಿರುವುದು, ಅತ್ಯುತ್ಸಾಹದ ವರ್ತನೆ, ಭೌದ್ಧಿಕ, ದೈಹಿಕ ಅಥವಾ ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಸ್ನೇಹಿತರು ಮತ್ತು ಕುಟುಂಬದವರಿಂದ ಬೆಂಬಲದ ಕೊರತೆ.

2010ರಲ್ಲಿ ನಿಮ್ಹಾನ್ಸ್ ಬೆಂಗಳೂರಿನಲ್ಲಿ 18-25 ವರ್ಷದ 436 ಪದವಿಪೂರ್ವ ವಿದ್ಯಾರ್ಥಿಗಳ ಮೇಲೆ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿತ್ತು. ಅದರಲ್ಲಿ ಶೇ.15ರಷ್ಟು ಮಂದಿ ಆತ್ಮಹತ್ಯೆ ಯೋಚನೆ ಮಾಡಿದ್ದರು. ಶೇ.9ರಷ್ಟು ಮಂದಿ ಆತ್ಮಹತ್ಯೆ ಪ್ರಯತ್ನ ನಡೆಸಿದ್ದರು. ಶೇ.9ರಷ್ಟು ಮಂದಿ ಭರವಸೆ ಕಳೆದುಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂತು.

ದೌರ್ಜನ್ಯಗಳಲ್ಲಿ ದೈಹಿಕ ದೌರ್ಜನ್ಯ ಅತಿ ಹೆಚ್ಚಾಗಿ ವರದಿಯಾಗಿರುತ್ತದೆ. ಅದರಲ್ಲೂ ಪುರುಷರು ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. (ಶೇ.30ಕ್ಕಿಂತ ಅಧಿಕ). ಆತ್ಮಹತ್ಯೆಗೆ ಯತ್ನಿಸುವ ಜನರಲ್ಲಿ ಹೆಚ್ಚಿನವರು ವಿವಿಧ ದೌರ್ಜನ್ಯದ ಅನುಭವ ಹೊಂದಿರುವವರು.

ಹದಿಹರೆಯದವರಲ್ಲಿ (13-18) ಖಿನ್ನತೆ ಪ್ರಮಾಣ, ಆತ್ಮಹತ್ಯೆ ಪ್ರಯತ್ನ ಮತ್ತು ಒತ್ತಡದ ಮೂಲವನ್ನು ಪರೀಕ್ಷಿಸಿದ್ದು, ಶಾಲೆ(200) ಮತ್ತು ಕಾಲೇಜಿನ(257) ಹದಿಹರೆಯದವರಲ್ಲಿ ಕಂಡುಬಂದ ಅಂಶಗಳು:
*ಶೇ.30ರಷ್ಟು ಸಾಧಾರಣರಿಂದ ತೀವ್ರ ಖಿನ್ನತೆ ಹೊಂದಿದ್ದಾರೆ.
*ಶೇ.11ರಷ್ಟು ಕಾಲೇಜು ವಿದ್ಯಾರ್ಥಿಗಳು ಮತ್ತು
ಶೇ.7.5ರಷ್ಟು ಶಾಲೆಗೆ ಹೋಗುವ ಹದಿಹರೆಯದವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಶೈಕ್ಷಣಿಕ ಒತ್ತಡ ಹೆಚ್ಚು ಕಾರಣ (ಶೇ.62.7), ಕೌಟುಂಬಿಕ ಸಮಸ್ಯೆಗಳು (ಶೇ.25.4) ಮತ್ತು ಸ್ನೇಹಿತರೊಂದಿಗೆ ಸಮಸ್ಯೆ(ಶೇ.11.8).

ಎಲ್ಲ ವಯೋಮಾನದವರನ್ನು ಪರಿಗಣಿಸಿದರೂ, ಕುಟುಂಬ ಸಮಸ್ಯೆ, ಅನಾರೋಗ್ಯ, ವೈಫಲ್ಯ, ವರದಕ್ಷಿಣೆ ಕಿರುಕುಳ, ಬಡತನ ಮತ್ತು ಡ್ರಗ್ ವ್ಯಸನಗಳು ಪ್ರಧಾನವಾಗಿ ಕಂಡುಬರುತ್ತವೆ.

ಹೀಗಾಗಿ ಆತ್ಮಹತ್ಯೆಗಳಿಗೆ ಹಲವಾರು ಅಂಶಗಳು ಒಟ್ಟಾಗಿ ಉಂಟಾಗುವ ದುರ್ಬಲ ಪರಿಸ್ಥಿತಿ ಕಾರಣವಾಗುತ್ತದೆ. ತಜ್ಞರ ಪ್ರಕಾರ ಈ ಅಂಶಗಳನ್ನು ಕಂಡು ಹಿಡಿದು ದುರ್ಬಲ ಪರಿಸ್ಥಿತಿಗಳಲ್ಲಿ ಸಹಾಯವಾಗಿಸುವಂತಾದರೆ ಬಹಳಷ್ಟು ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT