ನವದೆಹಲಿ (ಪಿಟಿಐ): ಲಖನೌದಲ್ಲಿ ಗೃಹ ಬಂಧನದಲ್ಲಿ ಇಡಬೇಕು ಎಂಬ ಸಹರಾ ಸಮೂಹ ಕಂಪೆನಿಯ ಮುಖ್ಯಸ್ಥ ಸುಬ್ರತೊ ರಾಯ್ ಅವರ ಕೋರಿಕೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಜಾಮೀನಿಗೆ ಅಗತ್ಯವಾದ ಹತ್ತು ಸಾವಿರ ಕೋಟಿ ಭದ್ರತಾ ಠೇವಣಿ ಇಡುವ ಬಗ್ಗೆ ತಾರ್ಕಿಕ ಮತ್ತು ಸಮ್ಮತವಾಗುವ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದೆ.
ನ್ಯಾಯಮೂರ್ತಿ ಜೆ. ಎಸ್. ಖೇಹರ್ ಅವರು ವಿಚಾರಣೆಯಿಂದ ಹಿಂದೆ ಸರಿದ ನಂತರ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಮತ್ತು ಎ. ಕೆ. ಸಿಕ್ರಿ ಅವರನ್ನು ಒಳಗೊಂಡ ಹೊಸ ಪೀಠವನ್ನು ರಚಿಸಲಾಗಿದ್ದು, ಸೂಕ್ತ ಪ್ರಸ್ತಾವನೆ ಸಲ್ಲಿಸದಿದ್ದರೆ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಹಾಗೂ ಇದರಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದೆ.