<p><strong>ಬೆಂಗಳೂರು:</strong> ಪುರಂದರ ದಾಸರ ಬಗ್ಗೆ ನಡೆದ ವ್ಯಾಖ್ಯಾನ ಹಾಗೂ ಅಧ್ಯಯನ ಕನಕದಾಸರ ಕುರಿತು ನಡೆದಿಲ್ಲ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.<br /> <br /> ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಸ್ತಕ ಮೇಳ–2015 ಉದ್ಘಾಟನಾ ಸಮಾರಂಭದಲ್ಲಿ ದಾಸ ಸಾಹಿತ್ಯ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ‘ಮಾನವೀಯತೆಯ ಮೇರುಶಿಖರ ಕನಕದಾಸರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> ‘ಪುರಂದರದಾಸರು ಹಾಗೂ ಕನಕದಾಸರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಅವರನ್ನು ಹೊರತುಪಡಿಸಿ ದಾಸ ಸಾಹಿತ್ಯವನ್ನು ನೋಡಲು ಸಾಧ್ಯವಿಲ್ಲ. ಕನಕದಾಸರ ಜೀವನ, ಸಾಧನ ಕ್ರಮ, ದರ್ಶನದ ನೆಲೆಯನ್ನು ಪಾರ್ಥಸಾರಥಿ ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಮಲ್ಲೇಪುರಂ ಅವರು ಹೇಳಿದರು.<br /> <br /> ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ, ‘ಪುಸ್ತಕಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ’ ಎಂದರು. ಅರಳುಮಲ್ಲಿಗೆ ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಿಗೆ ಸನ್ಮಾನ: ಇತಿಹಾಸ ತಜ್ಞ ಸುರೇಶ್ ಮೂನ, ಸಾಹಿತಿ ಸತ್ಯೇಶ್ ಎನ್.ಬೆಳ್ಳೂರ್, ಪತ್ರಕರ್ತ ಬಿ.ಗಣಪತಿ, ಸಮಾಜ ಸೇವಕ ವಿ.ರಾಮರಾಜು ಅವರನ್ನು ಸನ್ಮಾನಿಸಲಾಯಿತು.<br /> <br /> <strong>13ರವರೆಗೆ ಮೇಳ:</strong> ಶುಕ್ರವಾರದಿಂದ ಆರಂಭವಾಗಿರುವ ಪುಸ್ತಕ ಮೇಳ ಡಿ.13ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.<br /> <br /> <strong>ಅನುಮತಿ ನಿರಾಕರಣೆಗೆ ಬೇಸರ:</strong> ‘ಈ ಪುಸ್ತಕ ಮೇಳ ರಾಜಾಜಿನಗರದ ರಾಮಮಂದಿರದಲ್ಲಿ ನಡೆಯಬೇಕಿತ್ತು. ಅಲ್ಲಿ ಮೇಳ ನಡೆಸುವಂತೆ ನಾನು ಸಹ ಶಿಫಾರಸು ಮಾಡಿದ್ದೆ. ಆದರೆ, ಹತ್ತು ದಿನಗಳವರೆಗೆ ಅವಕಾಶ ನೀಡುವುದಿಲ್ಲವೆಂದು ನಗರ ಜಂಟಿ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ’ ಎಂದು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪುರಂದರ ದಾಸರ ಬಗ್ಗೆ ನಡೆದ ವ್ಯಾಖ್ಯಾನ ಹಾಗೂ ಅಧ್ಯಯನ ಕನಕದಾಸರ ಕುರಿತು ನಡೆದಿಲ್ಲ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.<br /> <br /> ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಸ್ತಕ ಮೇಳ–2015 ಉದ್ಘಾಟನಾ ಸಮಾರಂಭದಲ್ಲಿ ದಾಸ ಸಾಹಿತ್ಯ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ‘ಮಾನವೀಯತೆಯ ಮೇರುಶಿಖರ ಕನಕದಾಸರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> ‘ಪುರಂದರದಾಸರು ಹಾಗೂ ಕನಕದಾಸರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಅವರನ್ನು ಹೊರತುಪಡಿಸಿ ದಾಸ ಸಾಹಿತ್ಯವನ್ನು ನೋಡಲು ಸಾಧ್ಯವಿಲ್ಲ. ಕನಕದಾಸರ ಜೀವನ, ಸಾಧನ ಕ್ರಮ, ದರ್ಶನದ ನೆಲೆಯನ್ನು ಪಾರ್ಥಸಾರಥಿ ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಮಲ್ಲೇಪುರಂ ಅವರು ಹೇಳಿದರು.<br /> <br /> ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ, ‘ಪುಸ್ತಕಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ’ ಎಂದರು. ಅರಳುಮಲ್ಲಿಗೆ ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಿಗೆ ಸನ್ಮಾನ: ಇತಿಹಾಸ ತಜ್ಞ ಸುರೇಶ್ ಮೂನ, ಸಾಹಿತಿ ಸತ್ಯೇಶ್ ಎನ್.ಬೆಳ್ಳೂರ್, ಪತ್ರಕರ್ತ ಬಿ.ಗಣಪತಿ, ಸಮಾಜ ಸೇವಕ ವಿ.ರಾಮರಾಜು ಅವರನ್ನು ಸನ್ಮಾನಿಸಲಾಯಿತು.<br /> <br /> <strong>13ರವರೆಗೆ ಮೇಳ:</strong> ಶುಕ್ರವಾರದಿಂದ ಆರಂಭವಾಗಿರುವ ಪುಸ್ತಕ ಮೇಳ ಡಿ.13ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.<br /> <br /> <strong>ಅನುಮತಿ ನಿರಾಕರಣೆಗೆ ಬೇಸರ:</strong> ‘ಈ ಪುಸ್ತಕ ಮೇಳ ರಾಜಾಜಿನಗರದ ರಾಮಮಂದಿರದಲ್ಲಿ ನಡೆಯಬೇಕಿತ್ತು. ಅಲ್ಲಿ ಮೇಳ ನಡೆಸುವಂತೆ ನಾನು ಸಹ ಶಿಫಾರಸು ಮಾಡಿದ್ದೆ. ಆದರೆ, ಹತ್ತು ದಿನಗಳವರೆಗೆ ಅವಕಾಶ ನೀಡುವುದಿಲ್ಲವೆಂದು ನಗರ ಜಂಟಿ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ’ ಎಂದು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>